News Karnataka Kannada
Monday, May 13 2024
ಕರ್ನಾಟಕ

ಸುಭಾಷ್ ಚಂದ್ರ ಬೋಸರ 122ನೇ ಜನ್ಮ ದಿನಾಚರಣೆ

Photo Credit :

ಸುಭಾಷ್ ಚಂದ್ರ ಬೋಸರ 122ನೇ ಜನ್ಮ ದಿನಾಚರಣೆ

ಮಡಿಕೇರಿ: ಆಧುನಿಕ ಶೈಲಿಯ ಜೀವನಕ್ಕೆ ಮಾರುಹೋಗುತ್ತಿರುವ ಯುವಜನತೆ ಮಾದಕ ವ್ಯಸನಗಳಿಗೆ ತುತ್ತಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವ ಸಂಘಟನೆಗಳು ಯುವ ಸಮೂಹಕ್ಕೆ ಮಾರ್ಗದರ್ಶನ ನೀಡುವ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕೆಂದು ಮಡಿಕೇರಿ ತಾ.ಪಂ ಸದಸ್ಯ ಕೊಡಪಾಲು ಗಣಪತಿ ಅವರು ಕರೆ ನೀಡಿದ್ದಾರೆ.

ತಾಳತ್ತಮನೆಯಲ್ಲಿ ಜರುಗಿದ ಸುಭಾಷ್ ಚಂದ್ರ ಬೋಸರ 122ನೇ ಜನ್ಮ ದಿನಾಚರಣೆ ಮತ್ತು ನೇತಾಜಿ ಯುವಕ ಹಾಗೂ ಯುವತಿ ಮಂಡಲದ 27ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮದೆ ಮಹೇಶ್ವರ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ತೆಕ್ಕಡೆ ಗುಲಾಬಿ ಜನಾರ್ಧನ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ ಮಾತನಾಡಿ ಶುಭ ಹಾರೈಸಿದರು.

 ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರನ್ನು ರಕ್ಷಿಸಿದ ಕಗ್ಗೋಡ್ಲುವಿನ ನಾಗೇಶ್, ನವೀನ್, ತಾಳತ್ತಮನೆಯ ಕೆ.ಕೆ.ಗಣೇಶ್, ಸಚಿನ್ ಡಿಸೋಜ, ಬಿ.ಎಸ್.ಪವನ್ ರೈ ಹಾಗೂ ಡಿ.ಪಿ.ತಿಮ್ಮಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಅಲ್ಲದೆ ದಿನದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಯುವಕ ಮಂಡಲದ ಅಧ್ಯಕ್ಷ ಬಿ.ಬಿ.ದಿವೇಶ್ ರೈ ಸ್ವಾಗತಿಸಿದರೆ, ಯುವತಿ ಮಂಡಳಿಯ ಅಧ್ಯಕ್ಷ ಬಿ.ಎ.ಮಂಜುಳಾ ವಂದಿಸಿದರು. ಕಾರ್ಯಕ್ರಮವನ್ನು ಗಿರೀಶ್ ತಾಳತ್ತಮನೆ ನಿರೂಪಿಸಿ, ಬಹುಮಾನ ವಿಜೇತರ ಪಟ್ಟಿಯನ್ನು ಮಾಜಿ ಅಧ್ಯಕ್ಷ ಎಂ.ಎ.ಮಹಮ್ಮದ್ ರಫೀಕ್ ಓದಿದರು.

ಮಡಿಕೇರಿಯ ಶ್ರೀಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಬಿ. ಸತ್ಯೇಷ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಅಶೋಕ ಪೌಂಡೇಶನ್ ವ್ಯವಸ್ಥಾಪಕ ಬಿ.ಕೆ. ಬಾಲಕೃಷ್ಣ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿಯ ಡಿ.ಇ.ಒ ಕೆ.ಪಿಕಾರ್ಯಪ್ಪ, ಸ್ಥಳೀಯ ಬೆಳೆಗಾರರಾದ ಕಟ್ರತನ ಅನಂತಲಕ್ಷಿ ಶಿವರಾಮ್ ಉಪಸ್ಥಿತರಿದ್ದರು.

 ಅಧ್ಯಕ್ಷತೆಯನ್ನು ಮದೆನಾಡು ಗ್ರಾ.ಪಂ ಉಪಾಧ್ಯಕ್ಷರಾದ ಬಿ.ಎಸ್.ರತ್ನ ವಹಿಸಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು