ಹುಬ್ಬಳ್ಳಿ: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಬುರುಡೆ ಬಿಡುತ್ತಿದ್ದರು ಎನ್ನುವುದು ಫಲಿತಾಂಶದ ಬಳಿಕ ಸಾಬೀತಾಗಿದೆ ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್. ಅಶೋಕ್ ಹೇಳಿದರು.
ನಗರದಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಎಲ್ಲಾ ಕ್ಷೇತ್ರ ಗೆಲ್ಲುವುದು ಮತ್ತು ಬಿಜೆಪಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಅವರ ಜ್ಯೋತಿಷ್ಯಾಲಯವು ಈಗ ಮುಚ್ಚಿದೆ ಎಂದು ಅಶೋಕ್ ಲೇವಡಿ ಮಾಡಿದರು.
ಕೊಟ್ಟ ಮಾತಿನಂತೆ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು. ಅವರಿಂದಾಗಿ ಸರ್ಕಾರ ಉಳಿದಿದೆ. ಇದು ಎಲ್ಲಾ ಶಾಸಕರಿಗೂ ತಿಳಿದಿದೆ. ಸೋತವರಿಗೆ ಕೂಡ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದರು.