ಕಾಸರಗೋಡು: ವಿಶ್ವವಿದ್ಯಾನಿಲಯದಿಂದ ಅಮಾನತುಗೊಳಿಸಿದ್ದ ವಿದ್ಯಾರ್ಥಿಯೋರ್ವ ಕೈ ನರ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪೆರಿಯದಲ್ಲಿ ನಡೆದಿದೆ.
ಪೆರಿಯ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಅಖಿಲ್ ತಾಯತ್ತ್ (25) ಆತ್ಮಹತ್ಯೆಗೆತ್ನಿಸಿದವನು. ಈತನನ್ನು ಕಾಞಂಗಾಡ್ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈತ ವಿಶ್ವವಿದ್ಯಾಲಯ ವಿರುದ್ಧ ಫೇಸ್ ಬುಕ್ ನಲ್ಲಿ ಹೇಳಿಕೆಗಳನ್ನು ಪ್ರಚಾರಪಡಿಸಿದ್ದನು. ಈ ಹಿನ್ನೆಲೆಯಲ್ಲಿ ಈತನನ್ನು ವಿಶ್ವವಿದ್ಯಾಲಯದಿಂದ ಅಮಾನತುಗೊಳಿಸಲಾಗಿತ್ತು. ಅನಂತರ ಈತ ಪೆರಿಯದ ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದನು. ಇಂದು ಬೆಳಗ್ಗೆ ಈತ ವಿಶ್ವವಿದ್ಯಾಲಯ ಪರಿಸರದಲ್ಲಿ ತನ್ನ ಎಡ ಕೈಯ ನರವನ್ನು ಕತ್ತರಿಸಿದ್ದು, ಇದನ್ನು ಗಮನಿಸಿದ ಉಳಿದ ವಿದ್ಯಾರ್ಥಿಗಳು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದರು.