ಹಲಗೂರು: ಲಾಕ್ ಡೌನ್ ನಡುವೆ ಮೊದಲೇ ನಿಗದಿಯಾದ ಮದುವೆ ಮುತ್ತತ್ತಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುವ ತಾಳವಾಡಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಸರಳವಾಗಿ ವಿವಾಹ ನಡೆಯುವ ಮೂಲಕ ಅರ್ಜುನ್ ಮತ್ತು ರಂಜಿತಾ ಸತಿಪತಿಗಳಾದರು.
ಹಲಗೂರಿನ ತಿಮ್ಮೇಶ್ ಸುಮಿತ್ರಾ ದಂಪತಿ ಪುತ್ರ ಟಿ ಚಂದನ್ ಮತ್ತು ಬ್ಯಾಡರಹಳ್ಳಿ ಗ್ರಾಮದ ಸುಶೀಲಮ್ಮ ಅರ್ಜುನ್ ರವರ ಪುತ್ರಿ ರಂಜಿತಾರವರ ವಿವಾಹ ಮೊದಲೇ ನಿಗದಿಯಾಗಿತ್ತು. ಸರ್ಕಾರವೂ ಮೊದಲೇ ನಿಗದಿಯಾದ ಮದುವೆಯನ್ನು ನಡೆಸಬಹುದು ಎಂದು ತಿಳಿಸಿತ್ತು. ಹೀಗಾಗಿ ನಡೆದ ಸರಳ ವಿವಾಹ ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ ಮುಂಜಾಗ್ರತೆ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ಕೈಗೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ವರ ಚಂದನ್ ಸರಕಾರ ಮಾಡಿರುವ ನಿಯಮಗಳ ಅನುಸಾರವಾಗಿ 50 ಸಂಬಂಧಿಕರ ಗಳ ಜೊತೆ ನಾವು ಸರಳವಾಗಿ ವಿವಾಹವನ್ನು ಮಾಡಿಕೊಂಡಿದ್ದೇವೆ ಹೆಚ್ಚು ಹೆಚ್ಚು ಆಡಂಬರದಿಂದ ಮದುವೆ ಮಾಡಿಕೊಂಡು ಸಾಲದ ಸುಳಿಗೆ ಸಿಕ್ಕಿ ಕೊಳ್ಳುವುದಕ್ಕಿಂತ ಇಂತಹ ಸರಳ ವಿವಾಹವೇ ಉತ್ತಮವಾಗಿರುತ್ತದೆ ಇದನ್ನು ಎಲ್ಲರೂ ಅನುಸರಿಸಿದರೆ ಸುಖ ಜೀವನ ನಡೆಸಬಹುದು. ಸಮಾರಂಭದಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಮದುವೆ ಸಮಾರಂಭಕ್ಕೆ ಬಂದಿದ್ದವರಿಗೆ ಮಾಸ್ಕ್ಮತ್ತು ಸ್ಯಾನಿಟೈಸರ್ ವಿತರಣೆ ಮಾಡಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿರುವುದಾಗಿ ಹೇಳಿದ್ದಾರೆ.