ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾ.20 ರಂದು ನಡೆಯಲಿರುವ ರೈತ ಮಹಾಪಂಚಾಯತ್ ಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದ್ದು, ಸ್ವಯಂ ಪ್ರೇರಿತವಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಡ್ರೀಯ ರೈತ ನಾಯಕರು ಬೆಂಗಳೂರಿನಿಂದ ಮೌರ್ಯ.ವೃತ್ತದಿಂದ ಆಗಮಿಸಲಿದ್ದಾರೆ. 8 ಗಂಟೆಗೆ ತುಮಕೂರಿಗೆ ತಲುಪಲಿದ್ದಾರೆ. 1-30 ಕ್ಕೆ ಭದ್ರವಾತಿ ತಲುಪಲಿದ್ದಾರೆ.
ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಮೆರವಣಿಗೆ ರದ್ದುಗೊಳಿಸಲಾಗಿದೆ. ಸಭಾಕಾರ್ಯಕ್ರಮ 4 ಗಂಟೆಗೆ ಆರಂಭವಾಗಲಿದೆ. 4-6 ಗಂಟೆಯ ಒಳಗೆ ಮುಗಿಯಲಿದೆ. ಮಾಸ್ಕ್ ವಿತರಣೆ, ಸ್ಯಾನಿಟೈಜರ್, ನೀಡಲಾಗುವುದು. ಮಾದರಿ ಸಭೆ ನಡೆಯಲಿದೆ ಎಂದರು.
ಇದೊಂದೊಂದು ಜಾತ್ರೆಯ ರೀತಿಯಲ್ಲಿ ನಡೆಯಲಿದೆ, ಒಂದು ಲಾರಿ ಲೋಡ್ ಕಲ್ಲಂಗಡಿ, ಮಜ್ಜಿಗೆ, ಮಂಡಕ್ಕಿ ಗಳು ಸಭೆಗೆ ಭಾಗವಹಿಸಲಿರುವ ರೈತರಿಗೆ ಹಂಚಲಾಗುವುದು. ವಿಭಿನ್ನವಾಗಿ ಹಾಗೂ ಮಾದರಿಯಾಗುವ ಕಾರ್ಯಕ್ರಮ ನಡೆಯಲಿದೆ ಎಂದರು.
ಜೆಡಿಎಸ್ ಮುಖಂಡ ಶ್ರೀಕಾಂತ್ ಮಾತನಾಡಿ, ಭದ್ರಾವತಿಯಿಂದ ನೇರವಾಗಿ ರೈತ ನಾಯಕ ರಾಕೇಶ್ ಟಿಕಾಯತ್, ಮಹೇಂದ್ರ ಸಿಂಗ್ , ಚುಕ್ಕಿನಂಜುಂಡ ಸ್ವಾಮಿ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ ಎಂದರು.