News Karnataka Kannada
Wednesday, May 15 2024
ಕರ್ನಾಟಕ

ಮಾ.20 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾಪಂಚಾಯತ್ ಗೆ ಉತ್ತಮ ರೆಸ್ಪಾನ್ಸ್:  ರೈತ ಮುಖಂಡ ಬಸವರಾಜಪ್ಪ

Photo Credit :

ಮಾ.20 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾಪಂಚಾಯತ್ ಗೆ ಉತ್ತಮ ರೆಸ್ಪಾನ್ಸ್:  ರೈತ ಮುಖಂಡ ಬಸವರಾಜಪ್ಪ

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾ.20 ರಂದು ನಡೆಯಲಿರುವ ರೈತ ಮಹಾಪಂಚಾಯತ್ ಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದ್ದು, ಸ್ವಯಂ ಪ್ರೇರಿತವಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಡ್ರೀಯ ರೈತ ನಾಯಕರು ಬೆಂಗಳೂರಿನಿಂದ ಮೌರ್ಯ.ವೃತ್ತದಿಂದ ಆಗಮಿಸಲಿದ್ದಾರೆ. 8 ಗಂಟೆಗೆ ತುಮಕೂರಿಗೆ ತಲುಪಲಿದ್ದಾರೆ. 1-30 ಕ್ಕೆ ಭದ್ರವಾತಿ ತಲುಪಲಿದ್ದಾರೆ.

ಕೋವಿಡ್ ಎರಡನೇ ಅಲೆ ಹಿನ್ನಲೆಯಲ್ಲಿ ಮೆರವಣಿಗೆ ರದ್ದುಗೊಳಿಸಲಾಗಿದೆ. ಸಭಾಕಾರ್ಯಕ್ರಮ 4 ಗಂಟೆಗೆ ಆರಂಭವಾಗಲಿದೆ. 4-6 ಗಂಟೆಯ ಒಳಗೆ ಮುಗಿಯಲಿದೆ. ಮಾಸ್ಕ್ ವಿತರಣೆ, ಸ್ಯಾನಿಟೈಜರ್, ನೀಡಲಾಗುವುದು. ಮಾದರಿ ಸಭೆ ನಡೆಯಲಿದೆ ಎಂದರು.

ಇದೊಂದೊಂದು ಜಾತ್ರೆಯ ರೀತಿಯಲ್ಲಿ ನಡೆಯಲಿದೆ, ಒಂದು ಲಾರಿ ಲೋಡ್ ಕಲ್ಲಂಗಡಿ, ಮಜ್ಜಿಗೆ, ಮಂಡಕ್ಕಿ ಗಳು ಸಭೆಗೆ ಭಾಗವಹಿಸಲಿರುವ ರೈತರಿಗೆ ಹಂಚಲಾಗುವುದು. ವಿಭಿನ್ನವಾಗಿ ಹಾಗೂ ಮಾದರಿಯಾಗುವ ಕಾರ್ಯಕ್ರಮ ನಡೆಯಲಿದೆ ಎಂದರು.

ಜೆಡಿಎಸ್ ಮುಖಂಡ ಶ್ರೀಕಾಂತ್ ಮಾತನಾಡಿ, ಭದ್ರಾವತಿಯಿಂದ ನೇರವಾಗಿ ರೈತ ನಾಯಕ ರಾಕೇಶ್ ಟಿಕಾಯತ್, ಮಹೇಂದ್ರ ಸಿಂಗ್ , ಚುಕ್ಕಿನಂಜುಂಡ ಸ್ವಾಮಿ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು