ಮಡಿಕೇರಿ: ಜಿಲ್ಲೆಯಲ್ಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಗೆ ಸಿಲುಕಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೌಕರರ ಸಂಘ ಆರ್ಥಿಕ ನೆರವನ್ನು ನೀಡಿದೆ.
ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂ. ಗಳ ಚೆಕ್ನ್ನು ಇಂದು ಹಸ್ತಾಂತರಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕಟ್ಟಿ ಮೈಸೂರು, ಮಂಗಳೂರು, ಕೊಡಗು ವಲಯದ ಜಂಟಿ ಕಾರ್ಯದರ್ಶಿ ತೋರೆರ ಪೂವಯ್ಯ, ಮೈಸೂರು ವಲಯ ಜಂಟಿ ಕಾರ್ಯದರ್ಶಿ ಬಾಬು ಹಾಜರಿದ್ದರು.