ಮOಗಳೂರು : ಪತ್ನಿಯ ಮೇಲೆ ಸಂಶಯ ಪಟ್ಟು ಪತಿ ಆಕೆಯನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಘಟನೆ ಇಲ್ಲಿನ ದರೆಗುಡ್ಡೆಯಲ್ಲಿ ನಡೆದಿದೆ .ತನ್ನ ಕೃತ್ಯ ಮರೆಮಾಚಲು ಮಹಡಿ ಮೇಲಿಂದ ಬಿದ್ದಿರುವುದಾಗಿ ಬಿಂಬಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. .
ದಿನ್ರಾಜ್ ಒಂದುವರೆ ವರ್ಷದ ಹಿಂದೆ ಸುನಿತಾ ಎಂಬ ಯುವತಿಯೊಂದಿಗೆ ವಿವಾಹವಾಗಿದ್ದ. ಆದರೆ ಸುನಿತಾಳ ತಾಯಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದರಿಂದ, ಮಗಳು ಸುನಿತಾ ಸಹ ತಾಯಿಯೊಂದಿಗೆ ತವರು ಮನೆಯಲ್ಲೇ ಇರುತ್ತಿದ್ದಳು. ಆಕೆಯ ಪತಿ ದಿನ್ರಾಜ್ ಸಹ ಅಲ್ಲಿಗೆ ನಿತ್ಯವೂ ಬರುತ್ತಿದ್ದ.
ಆತ ಪದೇ ಪದೇ ಹೆಂಡತಿಯ ಸಂಶಯಪಡುತ್ತಿದ್ದರಿOದ ಗಂಡ ಹೆಂಡತಿಯ ನಡುವೆ ಆಗಾಗ ಜಗಳ ಆಗುತ್ತಿದ್ದು, ನಿನ್ನೆ ಸಂಜೆಯು ಸಹ ದಿನ್ರಾಜ್ ಮತ್ತು ಸುನಿತಾಳ ನಡುವೆ ಜಗಳ ನಡೆದಿದೆ ಆ ಸಂದರ್ಭದಲ್ಲಿ ಪತಿ ದಿನ್ರಾಜ್ ಪತ್ನಿಯ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ಸುನಿತಾಳ ತಲೆ,ಕುತ್ತಿಗೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದಿದೆ.ಇದನ್ನು ಕಂಡು ಸುನಿತಾಳ ತಾಯಿ ಚೀರಿಕೊಳ್ಳಲು ಆರಂಭಿಸಿದಾಗ ದಿನ್ರಾಜ್ ಪತ್ನಿಯನ್ನು ಮೂಡಬಿದ್ರೆ ಆಸ್ಪತ್ರೆಗೆ ದಾಖಲಿಸಿದ್ದಾನೆ. ತೀವ್ರ ರಕ್ತ ಸ್ರಾವ ಆಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಕೂಡಲೇ ಆಕೆಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದಾನೆ, ಅಲ್ಲಿ ತನ್ನ ಪತ್ನಿ ಮಹಡಿ ಮೇಲಿಂದ ಬಿದ್ದು ಗಾಯಗೊಂಡಿರುವುದಾಗಿ ತಿಳಿಸಿದ್ದಾನೆ, ಇದನ್ನು ಕಂಡು ವೈದ್ಯರಿಗೆ ಸಂಶಯ ಬಂದು ಮೂಡಬಿದ್ರೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ ಎಂದು ತಿಳಿದು ಬಂದಿದೆ