News Karnataka Kannada
Friday, May 10 2024
ಕರ್ನಾಟಕ

ಕೊರೋನಾ ಎರಡನೇ ಅಲೆ; ಶಿವಮೊಗ್ಗ ಕೋರ್ಟ್ ಸ್ಯಾನಿಟೈಜ್

Photo Credit :

ಕೊರೋನಾ ಎರಡನೇ ಅಲೆ; ಶಿವಮೊಗ್ಗ ಕೋರ್ಟ್ ಸ್ಯಾನಿಟೈಜ್

ಶಿವಮೊಗ್ಗ: ಶಿವಮೊಗ್ಗ ಕೋರ್ಟ್ ನ್ನ ಇಂದು ಸ್ಯಾನಿಟೈಜ್ ಮಾಡಲಾಗಿದೆ. ಇಲ್ಲಿನ ನ್ಯಾಯಾಧೀಶರೋರ್ವರಿಗೆ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಂದು ನ್ಯಾಯಾಲಯವನ್ನ ಸ್ಯಾನಟೈಜ್ ಮಾಡಲಾಗಿದೆ.

ಕೊರೋನ ಎರಡನೇ ಅಲೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ನಿನ್ನೆ ನ್ಯಾಯಾಧೀಶರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿರುವುದು ದೃಢವಾಗಿದೆ.

ನ್ಯಾಯಾಲಯದ ಸಿಬ್ಬಂದಿಯೋರ್ವರಲ್ಲಿ ಈ ಹಿಂದೆ ಕೊರೋನ ಸೋಂಕು ಪತ್ತೆಯಾಗಿತ್ತು. ಕಳೆದ ವಾರಗಳಿಂದ ನ್ಯಾಯಾಧೀಶರಿಗೆ ಬಾಯಿಯ ರುಚಿ ಕೆಡುವುದು,, ಮೈಕೈ‌ನೋವು ಕಾಣಿಸಿಕೊಂಡ ಬೆನ್ನಲ್ಲೇ ನಿನ್ನೆ ಮೆಗ್ಗಾನ್ ನಲ್ಲಿ ಇವರನ್ನ ಕೊರೋನ RAT ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಇವರನ್ನ ಹೋಮ್ ಐಸೋಲೇಷನ್ ಗೆ ಒಳಪಡಿಸಲಾಗಿದೆ. ಇಂದು ಬೆಳಿಗ್ಗೆ 8 ಗಂಟೆಗೆ ನ್ಯಾಯಾಲಯದ ಆವರಣವನ್ನ  ಸ್ಯಾನಿಟೈಜಿಂಗ್ ಮಾಡಲಾಗಿದೆ. ಈ ಕುರಿತು ಡಿಹೆಚ್ ಒ ಡಾ.ಸುರಗೀಹಳ್ಳಿ ಸ್ಪಷ್ಟಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು