ಕೊಪ್ಪಳ: ಗಂಗಾವತಿಯ ಕಲ್ಲುಮಠದ ಕೊಟ್ಟೂರೇಶ್ವರ ಸ್ವಾಮೀಜಿಯು ರಾಸಲೀಲೆಯಲ್ಲಿ ತೊಡಗಿದ್ದು ಇದೀಗ ಮಠವು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಅವರ ಕಾರು ಚಾಲಕ ಮಲ್ಲಯ್ಯ ಸ್ವಾಮಿ ಆರೋಪಿಸಿದ್ದಾರೆ.
ಸ್ವಾಮೀಜಿಯು ಲಾಡ್ಜ್ನ ಕೊಠಡಿಯಲ್ಲಿ ಮಹಿಳೆಯೊಂದಿಗೆ ಇರುವ ವಿಡಿಯೋವನ್ನು ಮಲ್ಲಯ್ಯ ಸ್ವಾಮಿ ಬಹಿರಂಗಗೊಳಿಸಿದ್ದಾರೆ.
ಈ ಹಿಂದೆ ವಿಡಿಯೋ ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ನನಗೆ ಸ್ವಾಮೀಜಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ. ಈ ಸಂಬಂಧ ಅವರು ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.