ಮಂಡ್ಯ: `ಡೆಡ್ ಸ್ಟೋರೇಜ್’ನ್ನೂ ದಾಟಿ ಅತ್ಯಂತ ಅಪಾಯಕಾರಿ ತಳಮಟ್ಟಕ್ಕೆ ಕುಸಿದಿದ್ದ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಚೇತರಿಕೆ ಕಾಣಿಸಿದ್ದು ರೈತರಲ್ಲಿ ಸಂತಸ ತಂದಿದೆ.
ಕಳೆದ ವರ್ಷವೂ ಮುಂಗಾರು ಕೈಕೊಟ್ಟಿತ್ತು. ಪರಿಣಾಮ ಕನ್ನಂಬಾಡಿ ತುಂಬಿರಲಿಲ್ಲ. ಜೊತೆಗೆ ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ತಮಿಳುನಾಡಿಗೆ ಕಾಲ ಕಾಲಕ್ಕೆ
ನೀರನ್ನು ಹರಿಸಿದ ಪರಿಣಾಮ ಮೇ ಆರಂಭದಲ್ಲಿ ಕನ್ನಂಬಾಡಿ ಡೆಡ್ ಸ್ಟೋರೇಜ್ (74 ಅಡಿ) ಕುಸಿದಿತ್ತು. ಮೇ 20ರ ವೇಳೆಗೆ 69.14 ಅಡಿಗೆ ಕುಸಿದಿತ್ತು.
124.80 ಗರಿಷ್ಠ ಸಾಮರ್ಥ್ಯದ ಜಲಾಶಯ ಡೆಡ್ ಸ್ಟೋರೇಜ್ (74 ಅಡಿ) ತಲುಪುತ್ತಿದ್ದಂತೆಯೇ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವಂತಿಲ್ಲ. 74 ರಿಂದ 68 ಅಡಿಯವರೆಗಿನ ಕುಡಿಯುವ ನೀರಿನ ಜರೂರಿಗಾಗಿ ಮಾತ್ರ ಬಳಸಿಕೊಳ್ಳಬೇಕು. 68 ಅಡಿಗಿಂತ ಕೆಳಮಟ್ಟಕ್ಕೆ ಇಳಿದಲ್ಲಿ ಅಲ್ಲಿಂದ ನೀರನ್ನು ಪಂಪ್ ಮಾಡುವುದು.
ಜಲಾಶಯದ ಭದ್ರತೆ ಮತ್ತು ಜಲಾಶಯ ಹಾಗೂ ಕೆಳಗಿನ ಪ್ರದೇಶಗಳನ್ನು ಜೀವ ವೈವಿಧ್ಯತೆಗಳಿಗೆ ವಿರುದ್ಧ ಮಾತ್ರವಲ್ಲದೆ, ನೀರಿನಲ್ಲಿ ಪಾಚಿ, ಕಲ್ಮಶ, ಧೂಳು ಮೊದಲಾದವು ಇರುವುದರಿಂದ ಅವುಗಳ ಸಂಸ್ಕರಣೆ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಜಲಾಶಯದ ಮಟ್ಟ 68 ತಲುಪುತ್ತಿದ್ದಂತೆಯೇ ನೀರಾವರಿ ಇಲಾಖೆಯಲ್ಲಿ ತೀವ್ರ ಆತಂಕ ಶುರುವಾಗುತ್ತಿತ್ತು.