ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ತೀರ್ಪನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಹೊರಡಿಸಿದೆ. ಮುಂಗಾರು ಹಂಗಾಮಿಗೆ ಮೊದಲೇ ನಾಲ್ಕು ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಪರಿಷ್ಕೃತ ಯೋಜನೆಯನ್ನು (ಸ್ಕೀಂ) ಜಾರಿ ಮಾಡುವಂತೆ ತೀರ್ಪನ್ನು ಸೂಚಿಸಿದೆ.
ಅದಲ್ಲದೆ ಮಂಡಳಿ ಮಾದರಿಯ ಪ್ರಾಧಿಕಾರ ಬೇಡ ಎಂದು ರಾಜ್ಯ ಸಲ್ಲಿಸಿದ್ದ ಆಕ್ಷೇಪಣೆಯನ್ನು ತಳ್ಳಿಹಾಕಿತು.
ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪನ್ನು ಹೊರಡಿಸಿದೆ.