ಕಾಬೂಲ್ ;ಆಫ್ಘಾನಿಸ್ತಾನದ ಪ್ರಭಾವಿ ಧರ್ಮಗುರು ಮೌಲ್ವಿ ಮೊಹಮ್ಮದ್ ಸರ್ದಾರ್ ಜರ್ಧಾನ್ ಅವರನ್ನು ಬಂಧಿಸಿರುವುದಾಗಿ ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಅಸಹಾಯಕ ಸ್ಥಿತಿಯಲ್ಲಿ ಕೂರಿಸಿರುವ ಮೌಲ್ವಿ ಅವರ ಭಾವಚಿತ್ರವನ್ನು ತಾಲಿಬಾನಿಗಳು ಬಿಡುಗಡೆ ಮಾಡಿದ್ದಾರೆ.
ಈ ಮೊದಲು ಬಾಲ್ಕ್ ಪ್ರಾಂತ್ಯದ ಮಹಿಳಾ ರಾಜ್ಯಪಾಲರಾದ ಸಲಿಮಾ ಮೊರ್ಜಾರಿ ಅವರನ್ನು ತಾಲಿಬಾನಿಗಳು ಬಂಧಿಸಿದ್ದರು. ಆಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಬಳಿಕ ಬಹಳಷ್ಟು ನಾಯಕರ ದೇಶ ಬಿಟ್ಟು ಪಲಾಯನವಾಗಿದ್ದಾರೆ. ಕೆಲವರು ದೇಶದಲ್ಲೇ ಉಳಿದುಕೊಂಡು ಶರಣಾಗತರಾಗಿದ್ದಾರೆ. ಇನ್ನು ಕೆಲವರು ಪ್ರತಿಭಟನಾರ್ತಕವಾಗಿ ತಿರುಗಿ ಬಿದ್ದಿದ್ದಾರೆ. ಅದರಲ್ಲಿ ಸಲಿಮಾ ಮೊರ್ಜಾರಿ ಪ್ರಮುಖರು. ಆಕೆಯ ಬಂಧನವಾಗುವವರೆಗೂ ಬಾಲ್ಕ್ ಪ್ರಾಂತ್ಯದ ಚಹಾರ್ ಜಿಲ್ಲೆಯನ್ನು ತಾಲಿಬಾನ್ಗಳ ವಶಕ್ಕೆ ಅವಕಾಶ ಕೊಟ್ಟಿರಲಿಲ್ಲ. ಧರ್ಮನಿಷ್ಟರೆಂದು ಹೇಳಲಾದ ತಾಲಿಬಾನಿಗಳು ಧರ್ಮಗುರುವನ್ನು ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಆಫ್ಘಾನಿಸ್ತಾನದ ಪ್ರಭಾವಿ ಧರ್ಮಗುರುವನ್ನು ಬಂಧಿಸಿದ ತಾಲಿಬಾನಿಗಳು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.