ಮೂಡಿಗೆರೆ: ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ 14ನೇ ಶತಮಾನದ್ದೆಂದು ಹೇಳಲಾಗುವ ತಾಮ್ರ ಶಾಸನವೊಂದನ್ನು ಶಾಸನ ಸಂಶೋಧಕ, ಜಿಲ್ಲಾ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಮೇಕನಗದ್ದೆ ಲಕ್ಷ್ಮಣಪ್ಪ ಗೌಡದ ಇವರು ಪತ್ತೆ ಹಚ್ಚಿದ್ದಾರೆ.
ಗ್ರಾಮದ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ನಾಗೇಶಗೌಡ ಇವರ ನೆರವಿನೊಂದಿಗೆ ಅದರಲ್ಲಿರುವ ಬರವಣಿಗೆಯ ನಕಲನ್ನು ಪಡೆದುಕೊಂಡು ಅದರ ಪಠ್ಯವನ್ನು ಸಂಗ್ರಹಿಸಿದ್ದು, ಮೈಸೂರಿನ ಶಾಸನ ತಜ್ಞರಾದ ಹೆಚ್. ಎಂ. ನಾಗರಾಜ ರಾವ್ ಇವರು ಓದಿ ಪಾಠಾಂತರಗೊಳಿಸಿದ್ದಾರೆ. ಸುಮಾರು ಒಚಿದು ಅಡಿ ಚೌಕಾಕಾರದಲ್ಲಿರುವ ಈ ತಾಮ್ರ ಪಟ್ಟಿಕೆಯು ಎರಡೂ ಬದಿಯಲ್ಲಿ ಬರವಣಿಗೆ ಇದ್ದು ಮುಂಭಾಗದಲ್ಲಿ 31 ಸಾಲು ಹಾಗೂ ಹಿಂಭಾಗದಲ್ಲಿ 30 ಸಾಲುಗಳಿವೆ. ಆರಂಭದಲ್ಲಿ ಶಿವ ಪಾರ್ವತಿ, ವೃಷಭ, ಸೂರ್ಯ ಇತ್ಯಾದಿಗಳು ಪೀಠಗಳಲ್ಲಿವೆ. ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯುವುದು ಈ ಶಾಸನದ ವಿಶೇಷವಾಗಿದ್ದು, ಶಾಸನದಲ್ಲಿ ಈ ನಾಡಿನ ದೇವತೆಗಳು, ಪೌರಾಣಿಕ ರಾಜಮನೆತನ ಭಾರತದ ನದಿಗಳ ಉಲ್ಲೇಖಗಳಿವೆ. ಇದೊಂದು ಧರ್ಮಶಾಸನವಾಗಿದ್ದು ಕೊನೆಯಲ್ಲಿ ಶಾಪಾಶಯ ವಾಕ್ಯಗಳಿವೆ. ಅಂಗವಂಗ ಕಳಿಂಗ ಕರ್ನಾಟಕ ಅಚಿದ್ರ ಮಹಾರಾಷ್ಟ್ರ ಮುಂತಾದ ಛಪ್ಪೆನೈವತ್ತಾರು ದೇಶವನ್ನು ಸುತ್ತಿ ಭಿಕ್ಷಾಟನೆಯಿಂದ ಸಂಗ್ರಹಿಸಿದ ಹಣದಿಂದ ಕಾಶಿ ವಿಶ್ವಾನಾಥನಿಗೆ 1310 ನೇ ಮಾರ್ಗಶಿರ ಶುದ್ಧ ಗುರುವಾರದಂದು ಮುಖ ಮಂಟಪ ನಿರ್ಮಿಸಿ ಪ್ರಚಾರ ಮಾಡಿಸಿರುವುದಾಗಿ ತಿಳಿಸುತ್ತದೆ.
ಈ ವಿವರಗಳೊಂದಿಗೆ ಈ ಧರ್ಮಕಾರ್ಯವನ್ನು ಕಾಯ್ದುಕೊಂಡವರಿಗೆ ನಾಗರ, ನರ್ಮದಾ, ಗೋದಾವರಿ, ಸರಸ್ವತಿ, ತುಂಗಭದ ಮುಪಹಾರಿ ಯಮುನ, ಕಾವೇರಿ ಪುಪರ್ನಿಕ ಮುಂತಾದ ಮಹಾನದಿಗಳಲ್ಲಿ ಮಿಂದಫಲ ದೊರಕುತ್ತದೆಂದು 14 ಲೋಕಗಳ ನಡುವೆ ಇರುವ ನರಲೋಕದ ಹಿರಿಮೆಯನ್ನು ಬಣ್ಣಿಸಲಾಗಿದ್ದು, ತಪ್ಪಿದರೆ ಕಾಸಿಯಲ್ಲಿ ಗೋಬ್ರಾಹ್ಮಣ ವದೆಯ ಫಲ ದೊರೆಯುತ್ತದೆಂಬ ಶಾಪಾಶಯ ಸಂಸ್ಕೃತ ಭಾಷೆಯಲ್ಲಿದೆ.