ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನಲ್ಲಿ ಬೈಕ್ ಹಾಗೂ ಟಾಟಾ ಎಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಕುಮಟಾದ ತಾಲೂಕಿನ ಕೊಟ್ಟೆಹಕ್ಕಲ್ ನಿವಾಸಿ ಈಶ್ವರ ಗೌಡ(40) ಮೃತಪಟ್ಟ ಬೈಕ್ ಸವಾರ. ಈತ ಮೂರೂರಿನಿಂದ ಕುಮಟಾ ಕಡೆ ಸಾಗುತ್ತಿದ್ದಾಗ ಕುಮಟಾದಿಂದ ಮೂರೂರು ಕಡೆ ತೆರಳುತ್ತಿದ್ದ ಟಾಟಾ ಏಸ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಅಪಘಾತ ಸಂದರ್ಭದಲ್ಲಿ ಬೈಕ್ ಸವಾರ ಈಶ್ವರ ಗೌಡನ ತಲೆಗೆ ಬಲವಾದ ಏಟು ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.