ದುಬೈ:ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೊನ್ಮುಖವಾಗಿರುವ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ., ಗಲ್ಫ್ ಕನ್ನಡ ಮೂವೀಸ್, ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾಯಿ, ಅಲ್ ಐನ್ ಕನ್ನಡ ಸಂಘ, ಸಂಯುಕ್ತ ಆಶ್ರಯದಲ್ಲಿ ಕೀರ್ತಿಶೇಷ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ದುಬಾಯಿಯಲ್ಲಿ ರಕ್ತದಾನ ಶಿಬಿರವನ್ನು 2021 ನವೆಂಬರ್ 19ನೇ ತಾರೀಕಿನಂದು ಪೂರ್ವಾಹ್ನ 10 ಗಂಟೆಯಿಂದ 12 ಗಂಟೆಯವರೆಗೆ ದುಬಾಯಿ ಲತಿಫಾ ಹಾಸ್ಪಿಟಲ್ನಲ್ಲಿ ಆಯೋಜಿಸಲಾಗಿತ್ತು.
ಯು.ಎ.ಇ.ಯ ಎಲ್ಲಾ ಭಾಗಗಳಿಂದ ರಕ್ತದಾನಿಗಳು ಆಗಮಿಸಿ ರಕ್ತದಾನ ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೊಂದಿಗೆ ಕರ್ನಾಟಕದ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂದ್ರ ತೆಲಂಗಾಣದಿಂದ ರಕ್ತದಾನಿಗಳು ರಕ್ತದಾನ ಮಾಡುರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸಮಸ್ಥ ಭಾಷಿಗರ ಆಭಿಮಾನಕ್ಕೆ ಸಾಕ್ಷಿಯಾಗಿತ್ತು.
ಶ್ರೀ ದೀಪಕ ಸೋಮಶೇಖರ ರವರ ಮುಂದಾಳತ್ವದಲ್ಲಿ ನಡೆದ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರದಲ್ಲಿ ದುಬಾಯಿಯಲ್ಲಿ ರಕ್ತದಾನ ಶಿಬಿರಗಳ ಸಂಯೋಜಕರಾದ ಶ್ರೀ ಬಾಲಕೃಷ್ಣ ಸಾಲಿಯಾನ್, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರು ಶ್ರೀ ಎಂ.ಇ. ಮೂಳೂರು, ಪೂರ್ವ ಅಧ್ಯಕ್ಷರು ಶ್ರೀ ಬಿ. ಕೆ. ಗಣೇಶ್ ರೈ, ನೋವೆಲ್ ಡಿ ಅಲ್ಮೆಡಾ, ಕನ್ನಡಿಗರು ದುಬಾಯಿ ಅಧ್ಯಕ್ಷೆ ಶ್ರೀಮತಿ ಉಮಾ ವಿದ್ಯಾಧರ್, ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ಪೂರ್ವ ಅಧ್ಯಕ್ಷರು ಶ್ರೀ ಹರೀಶ್ ಕೋಡಿ, ತುಳು ಪಾತೆರುಗ ತುಳು ಒರಿಪಾಗ ಸಂಘಟನೆಯ ಸಂಚಾಲಕರು ಶ್ರೀ ಪ್ರೇಮಜಿತ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ರಕ್ತದಾನ ಮಾಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ತಮ್ಮ ಶೃದ್ಧಾಂಜಲಿಯನ್ನು ಸಲ್ಲಿಸಿದರು.
ರಕ್ತದಾನಿಗಳಿಗೆ ಸಂಘ ಸಂಸ್ಥೆಗಳ ಪರವಾಗಿ ಪ್ರಶಂಸಾ ಪತ್ರ ನೀಡಲಾಯಿತು. ರಕ್ತದಾನಿಗಳಿಗೆ ಆಸ್ಪತ್ರೆ ಹಾಗೂ ಸಂಘಟನೆಯ ಪರವಾಗಿ ಹಣ್ಣು ಹಂಪಲು ತಂಪು ಪಾನಿಯದ ವ್ಯವಸ್ಥೆ ಮಾಡಲಾಗಿತ್ತು.
ಗಲ್ಫ್ ಮೂವೀಸ್, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾಯಿ ಸಂಘಟನೆಗಳ ಸದಸ್ಯರುಗಳು ರಕ್ತದಾನ ಶಿಬಿರದ ಯಶಸ್ಸಿನ ಹಿಂದೆ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಸಹಕರಿಸಿದ್ದರು.
ಕಳೆದ ಎರಡು ದಶಕಗಳಿಂದ ನಿರಂತರವಾಗಿ ಕರ್ನಾಟಕ ಪರ ಸಂಘಟನೆಗಳ ಅನಿವಾಸಿ ಕನ್ನಡಿಗರು, ಭಾರತೀಯರು ರಕ್ತದಾನ ಮಾಡಿಕೊಂಡು ಬರುತ್ತಿದ್ದು ಈ ಬಾರಿ ಕನ್ನಡದ ಕಣ್ಮಣಿ ಪುನಿತ್ ರಾಜ್ ಕುಮಾರ್ ರವರ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರ ಆರಬ್ ಸಂಯುಕ್ತ ಸಂಸ್ಥಾನದ ಹೆಲ್ತ್ ಮಿನಿಸ್ಟಿçಯ ದಾಖಲೆಯ ಪುಟಗಳಲ್ಲಿ ದಾಖಾಲಾಗಿದೆ.