ದುಬೈ: “ನಮಸ್ತೆ ಟೀಚರ್” ಎಂಬ ವಿನೂತನ ಕಾರ್ಯಕ್ರಮವನ್ನು ನ್ಯೂಸ್ ಕರ್ನಾಟಕ ಸೆಪ್ಟೆಂಬರ್ 5 ರಂದು ರಾತ್ರಿ 8 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ youtube.com/newskarnatakaa ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಈ ಕಾರ್ಯಕ್ರಮವನ್ನು ಸ್ಪೀಯರ್ ಹೆಡ್ ನ ಮಾಧ್ಯಮ ಸಂಸ್ಥೆಯ ಮಾರ್ಗದರ್ಶಕರಾದ ಸಿ ಎ ವೇಲರಿಯನ್ ಡಾಲಮೈದ ಹಾಗೂ ರಾಜೇಶ್ ಸೇಕ್ವೆರಿಯ ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐರಿಸ್ ಗ್ರೇಸ್ ಮೆನೇಜಸ್ ಮತ್ತು ಅವರ ವಿದ್ಯಾರ್ಥಿಗಳಾದ ಡಾ ವಿವಿಯನ್ ಡಿ ಅಲ್ಮೇಡಾ ಎಂಬಿಬಿಎಸ್, ಎಂಎಸ್ ಆರ್ಥೋ, ಮೆರೈನ್ ಪೈಲಟ್ ಕ್ಯಾಪ್ಟನ್ ಕಬೀರ್ ವಾಸ್ನಾಯಕ್, ಮುಕುಂದ್ ಯಲ್ಲಂಬಲ್ಸೆ (ವ್ಯಾಪಾರ ಅಭಿವೃದ್ಧಿ), ಉದ್ಯಮಿ ಶ್ರವಣ ಪೈ ಕುಲ್ಯಾಡಿ, ಜೇಸನ್ ರೋಡ್ರಿಗಸ್ (ಮೆಕ್ಯಾನಿಕಲ್ ಇಂಜಿನಿಯರ್), ಮುಖ್ಯಸ್ಥ ಎಚ್ ಆರ್ ಜೀಶನ್ ರಾಮಲನ್ ಮತ್ತು ಹಿರಿಯ ಬ್ರಾಂಡ್ ಮ್ಯಾನೇಜರ್ ವಿವೇಕ್ ಪಿಂಟೋ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.