ಮುಂಬೈ: ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಮಾರ್ಚ್ 9ನೇ ಶನಿವಾರದಂದು ಕಲೋತ್ಸವ ವಿಜಯೋತ್ಸವ ಪಾರ್ಟ್ 2 ನಡೆಯಲಿದೆ.
ಈ ಕಾರ್ಯಕ್ರಮದ ಹಿನ್ನೆಲೆ ಮಾ.9ರಂದು ಮಧ್ಯಾಹ್ನ 2.15 ರಿಂದ 4:45ರ ಸಂಜೆವರೆಗೆ ಗುರು ( ತುಳುವಿಗೆ ಅನುವಾದಗೊಂಡ ನಾಟಕ ) ದ ನಿರ್ದೇಶನ ಮತ್ತು ಶೀರ್ಷಿಕೆ ಪಾತ್ರವನ್ನು ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ನಿರ್ವಹಿಸಿದ್ದಾರೆ.
ಸಂಜೆ 5 ರಿಂದ 6.30ರ ವರೆಗೆ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅವರಿಂದ ಬಹು ಪ್ರತಿಭಾ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.
6 ರಿಂದ ರಾತ್ರಿ 9ರ ವರೆಗೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ತುಳು ನಾಟಕ “ಮೋಕೆದ ಜೋಕುಲು” 15 ನೇ ಪ್ರದರ್ಶನ ಇದಾಗಿದ್ದು, ಇದರಲ್ಲಿ ವಿಜಯಣ್ಣ 4 ವಿಭಿನ್ನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಕಲಾ ಜಗತ್ತು ಕ್ರಿಯೇಷನ್ಸ್ ಪ್ರಸ್ತುತ ಪಡಿಸುತ್ತಿದ್ದಾರೆ.