ದುಬೈ: ಕರ್ನಾಟಕ ರಾಜ್ಯೋತ್ಸವ 2023ರ ಪ್ರಯುಕ್ತ ಕರ್ನಾಟಕ ಸಂಘ ದುಬೈ ವತಿಯಿಂದ ದುಬೈನಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. 26ರ ನವೆಂಬರ್ 2023ರ ಭಾನುವಾರ ಮಧ್ಯಾಹ್ನ 2:00 ಗಂಟೆಗೆ ಅಲ್ ನಾಸರ್ ಲೀಷರ್ಲ್ಯಾಂಡ್ ಐಸ್ ರಿಂಕ್, ಔಧ್ ಮೇಥಾ ದುಬೈ (ಲಾಮ್ಸಿ ಪ್ಲಾಜಾ) ಬಳಿ ಕಾರ್ಯಕ್ರಮ ನಡೆಯಲಿದೆ.
ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿವರಾಜ ತಂಗಡಗಿ – ಕನ್ನಡ, ಸಂಸ್ಕೃತಿ ಮತ್ತು ಹಿಂದುಳಿದ ವರ್ಗಗಳ ಸಚಿವ, ಸುಮಲತಾ ಅಂಬರೀಶ್ – ಸಂಸದೆ ಮಂಡ್ಯ, ಡಾ.ಆರತಿ ಕೃಷ್ಣ – ಉಪಾಧ್ಯಕ್ಷೆ, ಕರ್ನಾಟಕ ಎನ್ಆರ್ಐ ಫೋರಂ ಹಾಗು
ಘನ ಉಪಸ್ಥಿತಿಯಲ್ಲಿ ಡಾ.ಮೊಯಿದ್ದೀನ್, ಡಾ.ಫ್ರಾಂಕ್ ಫರ್ನಾಂಡಿಸ್, ಪ್ರವೀಣ್ ಶೆಟ್ಟಿ, ಮದನ್ ಪಟೇಲ್, ಇಬ್ರಾಹಿಂ ಗಡಿಯಾರ್, ಶಿವಧ್ವಜ ಶೆಟ್ಟಿ, ಜಫ್ರುಲ್ಲಾ ಖಾನ್ ಮಂಡ್ಯ. ಶ್ರೀ ಆರ್.ರವಿ. ಡಾ.ಬಿ.ಕೆ.ಯೂಸುಫ್, ಹರೀಶ್ ಬಂಗೇರ, ರೊನಾಲ್ಡ್ ಮಾರ್ಟಿಜ್ ಇರಲಿದ್ದಾರೆ. ಇನ್ನು ಬೆಂಗಳೂರಿನ ಚಿರಂತನ ಡ್ಯಾನ್ಸ್ ಅಕಾಡೆಮಿಯಿಂದ ವಿಶಿಷ್ಟ ಥೀಮ್ ಡ್ಯಾನ್ಸ್ ಮತ್ತು ಪ್ರಸಿದ್ಧ ನೃತ್ಯ ಗುರು. ಸಂಜಯ್ ಶಾಂತಾರಾಮ್ ಮತ್ತು ತಂಡದಿಂದ ‘ಕರ್ನಾಟಕ ದರ್ಶನ’ ವಿಶೇಷ ನೃತ್ಯ ಸಂಯೋಜನೆ ನಡೆಯಲಿದೆ.
ಟಿವಿ ಕಲಾವಿದರಿಂದ ಹಾಸ್ಯ ಸ್ಕಿಟ್ ಗಳು, ಮಜಾ ಟಾಕೀಸ್ ಮತ್ತು ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಚಿಲ್ಲರ್ ಮಂಜು, ಚಂದ್ರಪ್ರಭಾ, ಕಾರ್ತಿಕ್, ರಾಘವೇಂದ್ರ ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಇನ್ನು ಕರಾವಳಿ ಯಕ್ಷಗಾನ ಹಾಸ್ಯ ದಿಗ್ಗಜರಾದ
ನವೀನ್ ಡಿ ಪಡೀಲ್, ದೀಪಕ್ ರೈ, ದಿನೇಶ್ ಕೊಡಪದ, ದಿನೇಶ್ ಕಡಬ ಇವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಕೋಗಿಲೆ ಖ್ಯಾತಿಯ ಪ್ರಸಿದ್ಧ ಗಾಯಕನ ಕನ್ನಡ ರಾಗ ನಡೆಯಲಿದ್ದು ಇದರಲ್ಲಿ ಸಂದೇಶ್ ನಿರ್ಮಾರ್ಗ, ನದೀರಾ ಬಾನು ಯುಎಇ ಗಾಯಕ ನವೀದ್ ಮಾಗುಂಡಿ ಭಾಗಿಯಾಗಲಿದ್ದಾರೆ. ಅಷ್ಟೆ ಅಲ್ಲದೆ, ಕರ್ನಾಟಕದಿಂದ 100 ಕ್ಕೂ ಹೆಚ್ಚು ಕಲಾವಿದರು ಮತ್ತು ಅತಿಥಿಗಳು ಈ ಭವ್ಯ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರವೇಶ ಟಿಕೆಟ್ ಗಳು ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಉಚಿತ ಟಿಕೆಟ್ ಪಡೆಯಲು ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದುದಾಗಿದೆ. QR ಕೋಡ್ ಮೂಲಕ ಮಾತ್ರ ಪ್ರವೇಶ ಪಡೆದುಕೊಳ್ಳಬೇಕು.
ಕರ್ನಾಟಕ ಸಂಘ ದುಬೈ ಇದರ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ., ದಯಾ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಖಜಾಂಚಿ ನಾಗರಾಜ್ ರಾವ್ (ಖಜಾಂಚಿ) ಮತ್ತು ಕಾರ್ಯಕಾರಿ ಸಮಿತಿ ಉಪಸ್ಥಿತರಿರುವವರು.