News Karnataka Kannada
Sunday, May 12 2024
ಹೊರನಾಡ ಕನ್ನಡಿಗರು

ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾಗಿ ವೆಂಕಟರಾವ್ ಆಯ್ಕೆ

Photo Credit :

ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾಗಿ ವೆಂಕಟರಾವ್ ಆಯ್ಕೆ

ಕತಾರ್: ಕರ್ನಾಟಕ ಸಂಘ ಕತಾರ್ ನ 2018-19ನೇ ಸಾಲಿನ ಹೊಸ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ವೆಂಕಟರಾವ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರೊಂದಿಗೆ ಹತ್ತು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾಗಿ ರವಿ ಶೆಟ್ಟಿ ಅವರನ್ನು ನೇಮಕ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ಎಚ್. ಕೆ. ಮಧು ಅವರು ಸಲಹಾ ಮಂಡಳಿಯ ಅಧ್ಯಕ್ಷರಾದರು.

ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಡಿ.ಎಸ್., ಖಜಾಂಚಿಯಾಗಿ ಮುರಳೀಧರ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶ್ವಿನ್ ಪಿ. ಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಬೋಳೂರ್, ಲಾಜಿಸ್ಟಿಕ್ ಹಾಗೂ ವಿಶಿಷ್ಟ ಅಗತ್ಯಗಳ ಸಂಯೋಜಕರಾಗಿ ದಿನೇಶ್ ಗೌಡ, ಜಂಟಿ ಕಾರ್ಯದರ್ಶಿ ಮತ್ತು ಸದಸ್ಯತ್ವ ಸಂಯೋಜಕರಾಗಿ ಯೋಗೀಶ್ ಪೈ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಶ್ಮಿ ಜಯರಾಮ, ಮಹಿಳಾ ಮತ್ತು ಮಕ್ಕಳ ವಿಭಾಗದ ಸಂಯೋಜಕರಾಗಿ ಆಶಾ ನಂಜಪ್ಪ, ಪರಿಸರ ಮತ್ತು ಕನ್ನಡ ಸಂಬಂಧಿತ ಸಂಯೋಜಕರಾಗಿ ಶಶಿಧರ ಹೆಬ್ಬಾಳ ಅವರನ್ನು ನೇಮಿಸಲಾಯಿತು ಎಂದು ಕರ್ನಾಟಕ ಸಂಘ ಕತಾರ್ ನ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು