ಮುಂಬಯಿ: ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವ ಸೇವಾಬಳಗದ ವತಿಯಿಂದ ಆ.5ರಂದು ಗುರುವಂದನಾ ಕಾರ್ಯಕ್ರಮವು ಕುರ್ಲಾದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನೆರವೇರಿತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಒಡಿಯೂರು ಯುವ ಸೇವಾ ಬಳಗ ಮುಂಬಯಿ ಇದರ ಸದಸ್ಯರು ನೇತ್ರದಾನ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಡಾ. ಆದಿತ್ಯ ಕೃಷ್ಣ ಶೆಟ್ಟಿ ಮತ್ತು ಡಾ. ಜಾನಕಿ ಕೋಡ್ಕಣ್ ಅವರು ನೇತ್ರದಾನದ ಬಗ್ಗೆ ಮತ್ತು ಅದರ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಿದರು.
ಸುಮಾರು 20ಕ್ಕಿಂತಲೂ ಅಧಿಕ ಸದಸ್ಯರು ನೇತ್ರದಾನ ಮಾಡುವುದಾಗಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳಿಂದ ದೃಢಿಕರಣ ಪತ್ರ ಪಡೆದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇದೇ ಸಂದರ್ಭದಲ್ಲಿ ನಡೆದವು.