ಮೈಸೂರು: ನಂಜನಗೂಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಗೆ ನಿರ್ದೇಶಕ ಎಸ್.ನಾರಾಯಣ್ ಬೆಂಬಲ ಸೂಚಿಸಿದ್ದಾರೆ.
ನಂಜನಗೂಡು ನಗರಕ್ಕೆ ಆಗಮಿಸಿದ ನಿರ್ದೇಶಕ ಎಸ್.ನಾರಾಯಣ್ ರವರು ದರ್ಶನ್ ಧ್ರುವನಾರಾಯಣ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ.
ಬಳಿಕ ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ, ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ದರ್ಶನ್ ಧ್ರುವನಾರಾಯಣ್ ಅವರ ಪರ ನಾನು ಕ್ಷೇತ್ರದಲ್ಲಿ ಉಚಿತವಾಗಿ ಪ್ರಚಾರ ಮಾಡುತ್ತೇನೆ.
ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ.
ಅವರ ಬೆನ್ನೆಲುಬಾಗಿ ನಾವು ನಿಲ್ಲಬೇಕು. ದೊಡ್ಡ ಮಟ್ಟದಲ್ಲಿ ಅವರು ಗೆದ್ದು ಬರಬೇಕು, ನಾನೇ ಸ್ವತಹ ಅವರಿಗೆ ಪೋನ್ ಮಾಡಿ ಬಂದೆ. ನಿಮ್ಮಿಂದ ಅವರಿಗೆ ಒಂದು ನೂರು ಮತವಾದರೂ ಬರಲಿ, ದಿನಾಂಕ ನಿಗದಿ ಮಾಡಿದರೆ ಚುನಾವಣಾ ಪ್ರಚಾರ ನಡೆಸಿಕೊಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಧ್ರುವನಾರಾಯಣ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.