News Karnataka Kannada
Wednesday, May 08 2024
ಸಾಂಡಲ್ ವುಡ್

ಯುವಕರ ಅಸಭ್ಯ ವರ್ತನೆಗೆ ತಾಳ್ಮೆ ಕಳೆದುಕೊಂಡು ವಾರ್ನಿಂಗ್ ಕೊಟ್ಟ ಗಾಯಕಿ ಮಂಗಲಿ

Mangli
Photo Credit :

ಒಂಗೋಲ್ : ರಾಬರ್ಟ್​ ಚಿತ್ರದ ತೆಲುಗು ವರ್ಷನ್​ ‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿರುವ ತೆಲಂಗಾಣದ ಜಾನಪದ ಗಾಯಕಿ ಮಂಗಲಿ ಸಾಲು ಸಾಲು ಸಿನಿಮಾಗಳಲ್ಲಿ ಹಾಡುವ ಮೂಲಕ ತುಂಬಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಹಾಡಿದ್ದ ಪುಷ್ಪ ಚಿತ್ರದ ಕನ್ನಡ ವರ್ಷನ್​ ‘ಊ ಅಂತಿಯಾ ಮಾವ ಊಹು ಅಂತಿಯಾ’ ಕೂಡ ತುಂಬಾ ಸದ್ದು ಮಾಡಿದೆ.

ಅಲ್ಲದೆ, ಏಕ್​ ಲವ್​ ಯಾ ಚಿತ್ರದ ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್​ ಇಟ್ಟೆ’ ಎಂಬ ಹಾಡು ಕೂಡ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ.

ತಮ್ಮ ವಿಶಿಷ್ಟ ಕಂಠದಿಂದಲೇ ಜನಪ್ರಿಯರಾಗಿರುವ ಮಂಗಲಿ ಇದೀಗ ಸ್ಟಾರ್​ ಸಿಂಗರ್​ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿಯೇ ಅವರು ಎಲ್ಲಿಯೇ ಹೋದರು ಸೆಲ್ಫಿಗಾಗಿ ಜನ ಮುಗಿಬೀಳುತ್ತಾರೆ. ಸಿನಿಮಾ ಹಾಡು ಮಾತ್ರವಲ್ಲದೇ, ಅನೇಕ ಕಾರ್ಯಕ್ರಮಗಳನ್ನು ಮಂಗಲಿ ನಡೆಸಿಕೊಡುತ್ತಾರೆ. ಇತ್ತೀಚೆಗಷ್ಟೇ ಅವರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್​ ಪಟ್ಟಣಕ್ಕೆ ಕಾರ್ಯಕ್ರಮ ನಿಮಿತ್ತ ತೆರಳಿದಾಗ ಮುಜುಗರದ ಪ್ರಸಂಗವೊಂದು ಜರುಗಿದೆ.

ಕಾರ್ಯಕ್ರಮ ಮುಗಿಸಿ ಕಾರು ಹತ್ತಲು ಹೋಗುವಾಗ ಅಲ್ಲಿಯೇ ಇದ್ದ ಯುವಕರ ಗುಂಪು ಸೆಲ್ಫಿಗಾಗಿ ಮಂಗಲಿ ಅವರನ್ನು ಸುತ್ತುವರಿದಿದ್ದಾರೆ. ಯುವಕರ ಗುಂಪು ತುಂಬಾ ಹತ್ತಿರಕ್ಕೆ ಬಂದಿದ್ದರಿಂದ ಅವರು ಮುಜುಗರಕ್ಕೀಡಾದರು. ಅಲ್ಲದೆ, ಯುವಕರ ಅಸಭ್ಯ ವರ್ತನೆ ನೋಡಿ ತಾಳ್ಮೆ ಕಳೆದುಕೊಂಡ ಮಂಗಲಿ ಜೋರು ಧ್ವನಿಯಲ್ಲಿ ಕೂಗಾಡಿದ್ದಲ್ಲದೆ, ಕೈಯಿಂದ ಹೊಡೆಯಲು ಯತ್ನಿಸಿದರು.

ಇದಾದ ಬಳಿಕ ತನ್ನ ಡ್ರೈವರ್‌ಗೆ ಕರೆ ಮಾಡಿ ಕಾರನ್ನು ಬೇಗ ತೆಗೆದುಕೊಂಡು ಬಾ ಎಂದು ಕೂಗಿದರು. ಅಲ್ಲದೆ, ತನ್ನ ಸಹಾಯಕರನ್ನು ಕೂಗಿ ಅವರ ಮೇಲೂ ಕೂಗಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು