ನಟ ಪುನೀತ್ ರಾಜ್ ಕುಮಾರ್ ಸಾವಿನಿಂದ ಮನನೊಂದ ಆಭಿಮಾನಿಗಳ ಆತ್ಮಹತ್ಯೆ ಮಾಡುತ್ತಿದ್ದು, ಇದರಿಂದ ಬೇಸರಗೊಂಡ ನಟ ಶಿವರಾಜ್ಕುಮಾರ್, ದಯವಿಟ್ಟು ಆತ್ಮಹತ್ಯೆ ನಿರ್ಧಾರ ಮಾಡಬೇಡಿ ಎಂದು ಆಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ಕುಮಾರ್, ‘ನಿಮ್ಮ ಕುಟುಂಬಕ್ಕೆ ನೀವು ಮುಖ್ಯ. ನಮಗೂ ನೀವು ಮುಖ್ಯ. ಪುನೀತ್ ರಾಜ್ಕುಮಾರ್ ಇಲ್ಲದ ನೋವು ನಮ್ಮಲ್ಲೂ ಇದೆ.
ಹಾಗಂತ ನೀವು ನಿಮ್ಮ ಕುಟುಂಬ ಮರೆತು ಆತ್ಮಹತ್ಯೆ ಮಾಡಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ.? ನಾವು ನೋವಲ್ಲಿ ಇದ್ದೇವೆ. ನೀವು ಈ ರೀತಿ ಮಾಡಿದ್ರೆ ನಮಗೆ ಮತ್ತಷ್ಟು ನೋವಾಗುತ್ತೆ. ಅಪ್ಪುಗೂ ಇಷ್ಟ ಆಗೋದಿಲ್ಲ. ದಯವಿಟ್ಟು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಮಾಡ್ಬೇಡಿ’ ಎಂದರು.