ಮಂಗಳೂರು: ನ್ಯೂಸ್ ಕರ್ನಾಟಕ ನಿಮ್ಮ ಮುಂದೆ ಪ್ರಸ್ತುತಪಡಿಸಲಿದೆ, ‘ಕರ್ನಾಟಕ ರತ್ನಕ್ಕೊಂದು ಪುನೀತ ನಮನ – ನೆನಪಿನ ದೋಣಿಯಲ್ಲಿ ರಾಜಕುಮಾರ, ಶ್ರದ್ಧಾಂಜಲಿ ಕಾರ್ಯಕ್ರಮ ನೇರ ಪ್ರಸಾರ ಮೂಲಕ ಡಿಸೆಂಬರ್ 2 ಗುರುವಾರ ಸಂಜೆ 7.00 ಐಎಸ್ ಟಿ ನಡೆಯಲಿದೆ.
ಸಂಗೀತ ಸಂಜೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಮತ್ತು ಗಾಯಕಿ ಮಾಲಿನಿ ಕೇಶವ ಪ್ರಸಾದ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಲಾವಿದರಾದ ದೀಪಕ್ ಜಯಶೀಲನ್ ಅವರು ಕೀಬೋರ್ಡ್ನಲ್ಲಿ, ಪ್ರಜ್ವಲ್ ತಬಲಾದಲ್ಲಿ ಮತ್ತು ರಾಜೇಶ್ ಭಾಗವತ್ ರಿದಂ ಪ್ಯಾಡ್ನಲ್ಲಿ ಸಹಕಾರ ನೀಡಲಿದ್ದಾರೆ.
ಖ್ಯಾತ ರೇಡಿಯೋ ಜಾಕಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಲಿದ್ದಾರೆ.