ಹುಬ್ಬಳ್ಳಿ: ರಾಜ್ಯಾದ್ಯಂತ ತನ್ನದೇ ಆದ ಅಭಿಮಾನಿಗಳ ಬಳಗ ಹೊಂದಿರೋ ನಟ ಸುದೀಪ ಈಗಾಗಲೇ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಶುರು ಮಾಡಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಮಹೇಶ ಟೆಂಗಿನಕಾಯಿ ಪರ ಕಿಚ್ಚ ರೋಡ್ ಶೋ ನಡೆಸಿದ್ದಾರೆ.
ರಾಜಾಜಿನಗರದ ದೇವಾಂಗಪೇಟೆಯಿಂದ ಬೆಂಗೇರಿಯ ಕಲ್ಮಶರ ದೇವಸ್ಥಾನದವರೆಗೆ ನಡೆಯಲಿರೋ ರೋಡ್ ಶೋನಲ್ಲಿ ಸುದೀಪ ನೋಡಲು ಅಭಿಮಾನಿಗಳು ಕಿಕ್ಕಿರಿದಿದ್ದಾರೆ.
ಮಹಡಿಯ ಮೇಲೆ ಹತ್ತಿದ ಅಭಿಮಾನಿಗಳು ಕಿಚ್ಚ ಸುದೀಪ ಮೇಲೆ ಪುಷ್ಪವೃಷ್ಠಿಗರೆದಿದ್ದಾರೆ. ರೋಡ್ ಶೋದಲ್ಲಿ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಸೇರಿದಂತೆ ಬಿಜೆಪಿ ಪಕ್ಷದ ಹಲವರು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದಾರೆ.