ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ವಿವಿಧ ಪಕ್ಷಗಳ ರಾಜಕಾರಣಿಗಳು ನೀಡಿದ ಆಹ್ವಾನವನ್ನು ನಟ ಯಶ್ ನಿರಾಕರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಯಶ್ ಅವರು ರಾಜ್ಯಾದ್ಯಂತ ಬಹಳ ಜನಪ್ರಿಯರಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲು ನಿರಂತರವಾಗಿ ಅವರನ್ನು ಸಂಪರ್ಕಿಸುತ್ತಿವೆ. ಆದಾಗ್ಯೂ, ಯಶ್ ತಮ್ಮ ಭವಿಷ್ಯದ ಯೋಜನೆಯತ್ತ ಗಮನ ಹರಿಸಿದ್ದಾರೆ ಮತ್ತು ರಾಜಕಾರಣಿಗಳ ಎಲ್ಲಾ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶ್ ಕೆಲವು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ನಟ ದರ್ಶನ್ ಅವರೊಂದಿಗೆ ಮಂಡ್ಯದಲ್ಲಿ ಕೊನೆಯ ದಿನದವರೆಗೂ ಪ್ರಚಾರ ನಡೆಸಿದ್ದರು.