ಬೆಂಗಳೂರು: ಹೊಸ ನಟರು ಮತ್ತು ಚೊಚ್ಚಲ ನಿರ್ದೇಶಕರನ್ನು ಒಳಗೊಂಡ ಕನ್ನಡ ಕ್ರೈಮ್ ಥ್ರಿಲ್ಲರ್ ‘ಧರಣಿ ಮಂಡಲ ಮಧ್ಯದೊಳಗೆ’ 25 ದಿನಗಳನ್ನು ಪೂರೈಸಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನಪ್ರಿಯ ತಾರೆಯರಾದ ಡಾಲಿ ಧನಂಜಯ್ ಮತ್ತು ಶೃತಿ ಹರಿಹರನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಸಿದ್ದಾರೆ.
ಶ್ರೀಧರ್ ಶಿಕಾರಿಪುರ, ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ ಮತ್ತು ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸಹ ಪಡೆದಿದೆ. ‘ಗುಲ್ಟು’ ಖ್ಯಾತಿಯ ನವೀನ್ ಶಂಕರ್ ಕೂಡ ಈ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ.
ಇಶಾನಿ ಶೆಟ್ಟಿ ಶಂಕರ್ ಎದುರು ನಾಯಕಿಯಾಗಿ ನಟಿಸಿದ್ದಾರೆ. ಸಿದ್ದು ಮೂಲಿಮನಿ, ಪ್ರಕಾಶ ತುಮ್ಮಿನಡು, ಓಂಕಾರ, ನಿತೇಶ್ ಮಹಾಜ್ ಮತ್ತು ಜಯಶ್ರೀ ಆರಾಧ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಚಿತ್ರವನ್ನು ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಓಂಕಾರ್ ನಿರ್ಮಿಸಿದ್ದಾರೆ. ಕ್ಯಾಮೆರಾ ವರ್ಕ್ ಕೀರ್ತನ್ ಪೂಜಾರಿ ಅವರದು; ರೋನಡ ಬಕ್ಕೇಶ್ ಮತ್ತು ಕಾರ್ತಿಕ್ ಚನ್ನೋಜಿ ರಾವ್ ಚಿತ್ರದ ಸಂಗೀತ ಸಂಯೋಜಿಸಿದ್ದಾರೆ.