News Karnataka Kannada
Saturday, May 04 2024
ಸಾಂಡಲ್ ವುಡ್

ಬೆಂಗಳೂರು: ವಿಧಾಸೌಧ ಮಾರಿ ನಮ್ಮೆಲ್ಲರ ಸಾಲ ತೀರಿಸುತ್ತೇನೆ ಅಂದಿದ್ದೇಕೆ ರಿಷಿ

Why Rishi said he would sell the Vidhana Soudha and pay off all our debts
Photo Credit : Facebook

ಬೆಂಗಳೂರು: ಏಪ್ರಿಲ್​ 10ರಂದು ‘ರಾಮನ ಅವತಾರ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಲಿದೆ. ಅದರ ಸಲುವಾಗಿ ಕುತೂಹಲ ಮೂಡಿಸಲು ರಿಷಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಅದೇ ರೀತಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭ ಆಗಿದೆ. ಎಲ್ಲ ಪಕ್ಷಗಳೂ ಭರ್ಜರಿಯಾಗಿ ಪ್ರಚಾರ ನಡೆಸುತ್ತಿವೆ. ಇಂಥ ಸಮಯದಲ್ಲಿ ಕನ್ನಡದ ನಟ ರಿಷಿ ಅವರು ವಿಧಾನಸೌಧ ಮಾರಿ, ಅದರಿಂದ ಬರುವ ಹಣದಲ್ಲಿ ಜನರ ಸಾಲ ತೀರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅವರು ಇಷ್ಟೆಲ್ಲ ಹೇಳಿರುವುದು ‘ರಾಮನ ಅವತಾರ’ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಅಷ್ಟೇ. ಸೋಶಿಯಲ್​ ಮೀಡಿಯಾದಲ್ಲಿ ರಿಷಿ ಹಂಚಿಕೊಂಡಿರುವ ವಿಡಿಯೋ ಸಖತ್​ ಇಂಟರೆಸ್ಟಿಂಗ್​ ಆಗಿದೆ.

ನಾನೇನಾದರೂ ಅಧಿಕಾರಕ್ಕೆ ಬಂದರೆ ವಿಧಾನಸೌಧ ಮಾರುತ್ತೇನೆ. ಎಲ್ಲರಿಗೂ ವರ್ಕ್​ ಫ್ರಮ್​ ಹೋಮ್​ ಇದೆ. ನಮ್ಮಂಥ ರಾಜಕಾರಣಿಗಳಿಗೆ ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಆಫೀಸ್​​ ಯಾಕೆ ಬೇಕು? ವಿಧಾನಸೌಧ ಮಾರಿ, ಅದರಿಂದ ಬಂದ ದುಡ್ಡಲ್ಲಿ ನಮ್ಮೆಲ್ಲರ ಸಾಲ ತೀರಿಸುತ್ತೇನೆ. ಪ್ಯಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಲಿಂಕ್​ ಉಚಿತವಾಗಿ ಮಾಡಿಸುತ್ತೇನೆ. ನನ್ನಂಥ ಹೊಸ ನಾಯಕ ಬೇಕು ಅಂದರೆ ನನಗೆ ನೀವು ವೋಟ್​ ಹಾಕಬೇಕು’ ಎಂದು ರಿಷಿ ಈ ವಿಡಿಯೋದಲ್ಲಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು