ಬೆಂಗಳೂರು: ಸೀರೆ ಎಲ್ಲ ಹೆಣ್ಣುಮಕ್ಕಳ ಆಸೆ. ಸೀರೆ ಮಾತ್ರ ಸೊಗಸಾಗಿದ್ದರೆ ಸಾಲದು, ಅದರ ಕುಪ್ಪಸ ಕೂಡ ಅಷ್ಟೇ ಚೆನ್ನಾಗಿ, ಸುಂದರವಾಗಿ, ಫಿಟ್ ಆಗಿರಬೇಕು. ಸೀರೆ ಕುಪ್ಪಸ ಸರಿಯಿಲ್ಲದಿದ್ದರೆ ಏನಾಗಬಹುದು ಎಂಬುದನ್ನು ಹೇಳಲು ಚಿತ್ರವೊಂದು ಸಿದ್ಧವಾಗಿದೆ. ಅದುವೇ ‘ರವಿಕೆ ಪ್ರಸಂಗ’. ಇತ್ತೀಚೆಗೆ, ನಿರ್ಮಾಪಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದರು.
ದೃಷ್ಟಿ ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಂತನು ಮಹರ್ಷಿ, ನಿರಂಜನ್ ಗೌಡ, ಗಿರೀಶ್ ಎಸ್ ಎಂ ಮತ್ತು ಶಿವರುದ್ರಯ್ಯ ಎಸ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರಕ್ಕೆ ಪವನ ಸಂತೋಷ್ ಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.