ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಒಬಿಸಿ ಮೋರ್ಚಾ ಸಂಸದರಿಗೆ ಮಾರ್ಚ್ 28 ರಂದು ಸಂಜೆ ದೆಹಲಿಯ ವೆಸ್ಟರ್ನ್ ಕೋರ್ಟ್ ಅನೆಕ್ಸ್ನಲ್ಲಿ ಔತಣಕೂಟವನ್ನು ಏರ್ಪಡಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
“ಪಕ್ಷದ ಉನ್ನತ ಮೂಲಗಳ ಪ್ರಕಾರ, ನಡ್ಡಾ ಅವರು ಮಾರ್ಚ್ 28 ರಂದು ದೆಹಲಿಯಲ್ಲಿ ಎಲ್ಲಾಒಬಿಸಿ ಮೋರ್ಚಾ ಸಂಸದರಿಗೆ ಔತಣಕೂಟವನ್ನು ಆಯೋಜಿಸಲಿದ್ದಾರೆ. ಈ ಸಂಸದರಿಗೆ ಅವರ ಪ್ರದೇಶಗಳಲ್ಲಿ ಕೆಲಸ ಮಾಡಲು ಸಲಹೆಗಳನ್ನು ನೀಡಲಾಗುತ್ತದೆ.
“ಪಕ್ಷದ 2024 ರ ಲೋಕಸಭೆ ಚುನಾವಣೆ ಮೇಲೆ ಗಮನಹರಿಸಿದೆ. ಸಮುದಾಯಕ್ಕೆ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲು ಮತ್ತು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ನೀತಿಗಳನ್ನು ಒಬಿಸಿ ಫಲಾನುಭವಿಗಳಿಗೆ ತಲುಪಿಸುವಂತೆ ತಿಳಿಸಲಾಗಿದೆ.” ಕರ್ನಾಟಕದಲ್ಲಿ ಒಬಿಸಿ ಸಮುದಾಯದಲ್ಲಿ ಅನೇಕ ಕಾರ್ಯಕ್ರಮ ಮತ್ತು ಕೂಟಗಳನ್ನು ಆಯೋಜಿಸುಲಾಗುವುದು ಎಂದು ಮೂಲಗಳು ಹೇಳಿವೆ.