ಸಕಲೇಶಪುರ: ಸಕಲೇಶಪುರ ಹಾಗೂ ಆಲೂರು ವಿಧಾನಸಭಾ ಕ್ಷೇತ್ರದ ಜನತೆಯಲ್ಲಿ ಬಾರಿ ಗೊಂದಲ ಶುರುವಾದಂತೆ ಕಾಣುತ್ತಿದೆ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಬಾರಿ ಚುನಾವಣೆಯಲ್ಲಿ ಗೆದ್ದು ಹೆಚ್.ಕೆ. ಕುಮಾರಸ್ವಾಮಿ ಅಧಿಕಾರ ಚಲಾಯಿಸಿದ್ದಾರೆ. ಆದರೆ ಸಕಲೇಶಪುರದಲ್ಲಿ ಕಾಡಾನೆ ಸಮಸ್ಯೆ ಬಿಟ್ಟು ಇನ್ನಿತರ ಆರೋಪಗಳಿಗೆ ಸಿಲುಕದೆ ಜವಾಬ್ದಾರಿವಾಯುತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕ್ಷೇತ್ರದ ಜನರ ಅಭಿಪ್ರಾಯ.
ಅದೇರೀತಿ ಎಲ್ಲ ಸಮುದಾಯದ ಜನರನ್ನು ಒಂದೇ ಭಾವದಿಂದ ನೋಡಿಕೊಂಡಿದ್ದಾರೆ ಎಂಬ ವಿಷಯವೂ ಅವರಿಗೆ ಪ್ಲಸ್ ಆಗಿದೆ.
ಆದರೆ ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ ರವರು ಹೆಸರಿಗಷ್ಟೇ ನಾನು ದಲಿತ ದಲಿತ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ದಲಿತರ ಕಷ್ಟ ಸುಖಗಳಿಗೆ ಧ್ವನಿಯಾಗಿಲ್ಲ ಎಂಬ ಆರೋಪವಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರವು ಜಿ.ಟಿ.ವೆಂಕಟೇಶ್ ಟಿಕೇಟ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಸ್ವಲ್ಪ ದಿನಗಳ ಹಿಂದೆ ಸಿಮೆಂಟ್ ಮಂಜು ಅವರ ಹೆಸರು ಬಿಜೆಪಿಯ ಪಕ್ಷದಲ್ಲಿ ಮಂಚೂಣಿಯಲ್ಲಿತ್ತು ಆದರೆ ಸಿಮೆಂಟ್ ಮಂಜು ಎಂಬ ಹೆಸರನ್ನು ಹಿಂದಕ್ಕೆ ತಳ್ಳಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಮಧ್ಯೆ ಗೊಂದಲವೊಂದು ಸೃಷ್ಟಿಯಾಗಿದೆ. ಅದೇನಂದರೆ ಲಿಂಗಾಯತ ಒಕ್ಕಲಿಗ ಸಮುದಾಯದ ಕಾರ್ಯ ಕರ್ತರು ಪಕ್ಷ ಸಂಘಟನೆಗೆ ಹಾಗೂ ಮತ್ತಿತರ ಖರ್ಚುಗಳಿಗೆ ಹಣ ಕೇಳಿದರೆ ಹಿಂದೆ ಮುಂದೆ ನೋಡದೆ ಕೊಡುತ್ತಾರೆ. ಆದರೆ ದಲಿತ ಸಮುದಾಯದ ಕಾರ್ಯಕರ್ತರು ಕೆಲಸ ಮಾಡಿದರೂ ಅವರಿಗೆ ಬೆಲೆ ಕೊಡದೆ ಇವಾಗ ಮತ್ತೊಮ್ಮೆ ಸಿಗುತ್ತೇನೆ ಕೊಡುತ್ತೇನೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ ಎಂಬ ಆರೋಪವಿದೆ.