ಕಾಸರಗೋಡು: ಫೇಮ್ ಅಡ್ವೆಂಚರ್ ಅಕಾಡಮಿ ಮಂಗಳೂರು ಇವರ ವತಿಯಿಂದ ಕಾಸರಗೋಡಿನ ಉಪ್ಪಂಗಳದ ವೇಣು ಶರ್ಮ ಅವರ ಮನೆಯಲ್ಲಿ 2 ದಿನದ ಸಾಹಸ ಶಿಬಿರ ಕಾರ್ಯಕ್ರಮ ನಡೆಯಿತು.
ಈಲ್ಲಿ ಮುಖ್ಯವಾಗಿ ರಿವರ್ ರಾಫ್ಟಿಂಗ್, ಪ್ರಥಮ ಚಿಕಿತ್ಸೆ, ಹಾವು ಕಚ್ಚಿದ ಅಥವಾ ಬೆಂಕಿ ಬಿದ್ದಂತಹ ಸಮಯದಲ್ಲಿ ಪಾಲಿಸಬೇಕಾದ ಕ್ರಮಗಳು, ಜಂಗಲ್ ಸರ್ವೈಲ್ ಆಹಾರಗಳು ಇವುಗಳ ಬಗ್ಗೆ ಅಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ.
ವರ್ಷದಲ್ಲಿ 6ರಿಂದ 7 ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳುವ ಈ ಫೇಮ್ ಅಡ್ವೆಂಚರ್ ಮಕ್ಕಳಿಗೆ ಒಂದು ಉತ್ತಮ ಸಹಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ.
ಈ ವರ್ಷದ ಫೇಮ್ ಅಡ್ವೆಂಚರ್ ಸಾಹಸ ಶಿಬಿರದಲ್ಲಿ ಒಟ್ಟು 22 ಜನ ಭಾಗವಹಿಸಿದ್ದು. ಅವರ ತೋಟದ ಮನೆಯಲ್ಲಿಯೇ ಎಲ್ಲರಿಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಮಳೆಗಾಲವಲ್ಲದ ಸಮಯದಲ್ಲಿ ಬೆಳುವಾಯಿಯ ಶೃಂಗಶಾಮಲ ರೆಸಾರ್ಟ್ನಲ್ಲಿ ಈ ಸಾಹಸ ಶಿಬಿರವನ್ನು ನಡೆಸುತ್ತಾರೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಫೇಮ್ ಅಡ್ವೆಂಚರ್ ನ ಫೌಂಡರ್ ಆಗಿರುವ ವೇಣು ಶರ್ಮ ಅವರು ಮಕ್ಕಳಿಗೆ ಹಾಗೂ ಜನ ಸಾಮನ್ಯರಿಗೆ ಒಂದು ಬೇಸಿಕ್ ಆದ ವಿಚಾರಗಳನ್ನು ಹೇಳಿಕೊಡುವುದರ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಇದೊಂದು ಉತ್ತಮ ಅವಕಾಶ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇವರ ಜೊತೆಗೆ ಸಂತೋಷ, ಪೀಟರ್ ಡಿ’ ಸೋಜಾ , ನಿತಿನ್ ಸುವರ್ಣ , ಅಜಯ್ , ಸುಹಾನ್, ಶೇರಿನ್ ಇವರು ಕೊ ಫೌಂಡರ್ ಆಗಿ ಈ ಫೇಮ್ ಅಡ್ವೆಂಚರ್ ನಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ.
ಮಕ್ಕಳಲ್ಲಿ ಅಡ್ವೆಂಚರ್ ಆಟಿಟ್ಯುಡ್ ಬೆಳೆಸುವುದು ಈ ಫೇಮ್ ಅಡ್ವೆಂಚರ್ನ ಮುಖ್ಯ ಉದ್ದೇಶ ಎಂದರೂ ತಪ್ಪಾಗಲಾರದು.