News Karnataka Kannada
Wednesday, May 01 2024
ವಿಶೇಷ

ಬಂಟ್ವಾಳ: ರಜಾ ಅವಧಿಯಲ್ಲಿ ಬಾವಿ ತೋಡಿ ಗಮನ ಸೆಳೆದ ಜಲಭಗೀರಥ ವಿದ್ಯಾರ್ಥಿ

Bantwal: A PUC student who dug a well during the holiday season
Photo Credit : By Author

ಬಂಟ್ವಾಳ: ನರಿಕೊಂಬು ನಾಯಿಲದ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ರಜಾ ಅವಧಿಯಲ್ಲಿ ಬಾವಿ ತೋಡಿ ಗಮನ ಸೆಳೆದಿದ್ದು, ಇದೀಗ ಬಾವಿಯಲ್ಲಿ ಬರೋಬ್ಬರಿ ನೀರು ತುಂಬಿ ಅವರ ಕುಟುಂಬ ಸಂತಸದಲ್ಲಿದೆ.

ನಾಯಿಲ ನಿವಾಸಿ ಲೋಕನಾಥ್ ಅವರ ಪುತ್ರ ಸೃಜನ್ ಎಂಬಾತ ಬಾವಿ ಕೊರೆದ ವಿದ್ಯಾರ್ಥಿ. ಅವರ ಮನೆಗೆ ನಳ್ಳಿ ನೀರೇ ಆಶ್ರಯವಾಗಿದ್ದು, ಆದರೆ ಹಲವು ಕಾರಣಕ್ಕೆ ನೀರು ಪದೇ ಪದೇ ಕೈಕೊಡುತ್ತಿದ್ದ ಪರಿಣಾಮ ನೀರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಬಾಲಕ ಯಾವಾಗಲೂ ತಾನು ಬಾವಿ ಕೊರೆಯುವುದಾಗಿ ಹೇಳುತ್ತಿದ್ದ‌. ಆದರೆ ಮನೆಯವರು ಅದನ್ನು ಗಂಭೀರವಾಗಿ ಪರಿಗಣಿಸದೆ ಬೈಯುತ್ತಿದ್ದರು.

ಸೃಜನ್ ಪ್ರಥಮ ಪಿಯುಸಿ ಪರೀಕ್ಷೆ ಬರೆದು ರಜೆಯಲ್ಲಿ ಒಬ್ಬನೇ ಬಾವಿ ತೋಡಲು ಆರಂಭಿಸಿ ಕಳೆದ ವಾರ ಆತನಿಗೆ ಬೇಕಾದಷ್ಟು ನೀರು ಲಭಿಸಿದೆ. ಬಾವಿ ಆಳವಾಗುತ್ತಿದ್ದಂತೆ ಮೂರ್ನಾಲ್ಕು ಬುಟ್ಟಿಯಲ್ಲಿ ಮಣ್ಣು ತುಂಬಿಸಿ ಬಳಿಕ ಮೇಲೆ ಬಂದು ಅದನ್ನು ಒಬ್ಬನೇ ಎಳೆದು ಮಣ್ಣು ಖಾಲಿ ಮಾಡುತ್ತಿದ್ದನು.

ಸುಮಾರು ೨೪ ಅಡಿ ಆಳದಲ್ಲಿ ‌ನೀರು ಲಭಿಸಿದ್ದು, ೩ ಅಡಿಯಷ್ಟು ನೀರು ತುಂಬಿಕೊಂಡಿದೆ. ಈ ಬೇಸಗೆಯಲ್ಲೂ ಅಷ್ಟೊಂದು ಪ್ರಮಾಣದ ನೀರು ಲಭಿಸಿರುವುದು ವಿಶೇಷವಾಗಿದೆ. ಸೃಜನ್ ಸಾಹಸವನ್ನು ಕಂಡು ಮನೆ ಮಂದಿ ಸಂತಸ ಪಟ್ಟಿರುವ ಜತೆಗೆ ಊರಿನ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು