ಆಮೆ, ಸರಿಸೃಪ ಹಾಗೂ ವನ್ಯಜೀವಿಗಳ ಉಳಿವಿಗಾಗಿ ಪ್ರತಿ ದಿನವೂ ಒಂದಲ್ಲಾ ಒಂದು ರೀತಿಯ ಯೋಜನೆಗಳು ಜಾರಿಗೆ ಬರುತ್ತಿವೆ. ಇದರಿಂದ ಕಾಡಿನ ಪ್ರಾಣಿಗಳಿಗೆ ಹಲವಾರು ಪ್ರಯೋಜನಗಳು ಆಗಿವೆ ಈ ಸಾಲಿಗೆ ಇನ್ನೋಂದು ಮುಖ್ಯ ಯೋಜನೆ ಸೇರಿಕೊಳುವ ಸಾದ್ಯತೆ ಇದೆ ಅದುವೇ ರೈಲು ಹಳಿಗಳ ಅಡಿಯಲ್ಲಿ ‘ಯೂ’ ಆಕಾರದ ಕಂದಕಗಳ ನಿರ್ಮಾಣ.
ಕಾಡಿನ ಮಧ್ಯೆ ಮುಖ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಈ ‘ಯೂ’ ಆಕಾರದ ಕೊಳವೆಗಳ ನಿರ್ಮಾಣದಿಂದ ಹಲವು ಸಣ್ಣ ಪುಟ್ಟ ವಿಶೇಷ ಪ್ರಾಣಿಗಳನ್ನು ಬದುಕಿಸಬಹುದು. ಸಂತಾನೋತ್ಪತ್ತಿಗಾಗಿಯೋ ಅಥವಾ ಇನ್ನಾವುದೋ ಕಾರಣಗಳಿಗಾಗಿಯೋ ಪಶ್ಚಿಮ ಘಟ್ಟದ ಇತರ ಭಾಗಗಳಿಗೆ ವಲಸೆ ಹೋಗುವ ಆಮೆ, ಹಾವು, ಏಡಿ, ಹಲ್ಲಿಗಳು ತಮಗೆ ತಲುಪಬೇಕಾದ ಆವಾಸ ಸ್ಥಾನವನ್ನು ತಲುಪಬಹುದು. ಈ ಸಮಯದಲ್ಲಿ ಅವು ಹಳಿಗಳನ್ನು ದಾಟುವಾಗ ರೈಲುಗಳ ಅಡಿಯಲ್ಲಿ ಸಿಲುಕಿಕೊಂಡು ಜೀವ ಕಳೆದುಕೊಳ್ಳುತ್ತವೆ ಈ ಕಾರಣಕ್ಕಾಗಿ ರೈಲು ಹಳಿಗಳ ಕೆಳಭಾಗದಲ್ಲಿ ಯೂ ಆಕಾರದ ಕಂದಕಗಳನ್ನು ನಿರ್ಮಿಸಿದರೆ ಅವುಗಳ ಸಾವನ್ನು ಕಡಿಮೆಗೊಳಿಸಬಹುದು.
ವಿದೇಶಗಳಲ್ಲಿ ಈಗಾಗಲೆ ಈ ಯೋಜನೆ ಜಾರಿಯಲ್ಲಿದ್ದು ಹಲವಾರು ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳದೆ ರೈಲ್ವೆಯನ್ನು ದಾಟುತ್ತಿವೆ. ಮಂಗಳೂರಿನ ವನ್ಯಜೀವಿ ಕಾರ್ಯಕರ್ತ ನಾಗರಾಜ್ ದೇವಾಡಿಗ ಈ ಕುರಿತು ಎಮ್ಒಎಫ್ಎಫ್ಸಿಸಿ ಸಚಿವ ಭೂಪೇಂದ್ರ ಯಾದವ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದು, ನೈರುತ್ಯ ರೈಲ್ವೆ ಅಡಿಯಲ್ಲಿ ಬರುವ ಪುತ್ತೂರಿನ ಸಮೀಪದ ಕಬಕ ಮತ್ತು ಹಾಸನ ನಡುವೆ ೧೩೯ ಕಿಮೀ ಉದ್ದ ಈ ‘ಯೂ’ ಆಕಾರದ ಕಂದಕಗಳನ್ನು ನಿರ್ಮಿಸಲು ಒತ್ತಾಯಿಸಿದ್ದಾರೆ.
ಈ ವಿಷಯದ ಕುರಿತು ಪರಿಸರವಾದಿ ಹೋರಾಟಗಾರ ದಿನೇಶ್ ಹೊಳ್ಳ ನ್ಯೂಸ್ ಕನ್ನಡದ ಜೊತೆ ಮಾತನಾಡಿ ‘ರೈಲ್ವೆ ಇಲಾಖೆ ಇಂತಹ ಸೂಕ್ಷ್ಮ ವಿಚಾರಗಳಿಗೆ ಒತ್ತು ನೀಡುತ್ತಿರುವುದು ಬಹಳ ಒಳ್ಳೆಯ ವಿಚಾರ ಈ ದೊಡ್ಡ ಪ್ರಾಣಿಗಳ ಒಂದು ಪ್ರಾಮುಖ್ಯತೆ ಎಷ್ಟು ಇದೆಯೋ ಅಷ್ಟೆ ಪ್ರಾಮುಖ್ಯತೆ ಈ ಆಮೆ, ಸರಿಸೃಪಗಳಿಗೆ ನೀಡುವುದು ತುಂಬಾ ಉತ್ತಮ ವಿಷಯ. ಈ ‘ಯೂ’ ಆಕಾರದ ಕಂದಕ ನಿರ್ಮಾಣದಿಂದಾಗಿ ಅದೆಷ್ಟು ಸಣ್ಣ ವನ್ಯ ಜೀವಿಗಳ ಜೀವ ಉಳಿಯುವುದು ಖಂಡಿತ’ ಎಂದರು.