ಒಂದು ಮನೆಯಲ್ಲಿ ವಾಸಮಾಡುವ ಎಲ್ಲಾ ಸದಸ್ಯರ ಮನಸ್ಸು ಒಂದೇ ತರ ಯೋಚನೆ ಮಾಡುವುದಿಲ್ಲ. ಪ್ರತಿಯೊಬ್ಬರು ಕೂಡ ಭಿನ್ನ ವ್ಯಕ್ತಿಗಳು ಆಗಿರುವುದರಿಂದ ಅವರು ಯೋಚನೆ ಮಾಡುವ ರೀತಿಯೆ ಬೇರೆನೆ ಆಗಿದೆ.ಹಾಗಾಗಿ ಕೆಲವೊಮ್ಮೆ ಮನೆಯ ವಾತಾವರಣದ ಮೇಲೆ ಪರಿಣಾಮ ಬೀಳುತ್ತದೆ.
ಈ ಭಿನ್ನ ವ್ಯಕ್ತಿಗಳು ಕೆಲವೊಮ್ಮೆ ತಮ್ಮ ಇಚ್ಛೆಗೆ ಅನುಸಾರವಾಗಿ ನಡೆದು ಕೊಳ್ಳುತ್ತಾರೆ. ಇದು ಕೆಲವೊಮ್ಮೆ ಮನೆಯ ವಾತಾವರಣವನ್ನು ಕೆಡಿಸುವ ಸಾಧ್ಯತೆ ಇದೆ.ಇದು ಒಳ್ಳೆಯ ರೀತಿಯಲ್ಲಿ ಆಗಿರಬಹುದು ಅಥವಾ ಕೆಟ್ಟ ರೀತಿಯಲ್ಲಿಯೂ ಆಗಿರಬಹುದು.
ತಮ್ಮ ಇಷ್ಟ, ತಮ್ಮ ಮಾತು, ಅವಶ್ಯಕತೆ ಹೀಗೆ ಪ್ರತಿಯೊಂದು ವಿಷಯದಲ್ಲಿ ತಮ್ಮ ಮೊಂಡುವಾದವನ್ನು ಎಲ್ಲರ ಮುಂದೆ ಇಡುತ್ತಾರೆ. ಇದರಿಂದ ತಮ್ಮ ವಾದದಿಂದ ಮೇಲೂ ಗೈ ಸಾಧಿಸಲು ಪ್ರಯತ್ನಿಸುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ, ಗುಣ ಬೇರೆಯೇ ಆಗಿರುತ್ತದೆ. ಕೆಲವರು ಶಾಂತ,ಇನ್ನು ಕೆಲವರು ವಿರುದ್ಧ ಎಂಬಂತೆ ಸಿಡುಕಾಗಿರುತ್ತಾರೆ. ವ್ಯಕ್ತಿಯ ಸಿಡುಕುತನಕ್ಕೆ ಕಾರಣ ಹಲವು ಆದರೆ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಸೌಜನ್ಯ ಎಲ್ಲರಲೂ ಇರುವುದಿಲ್ಲ. ಒಂದು ಮನೆಯ ಎಂದರೆ ಅಲ್ಲಿ ಎಲ್ಲರೂ ಸಮಾನಾರು. ಇಲ್ಲಿ ಪ್ರತಿಯೊಬ್ಬರಿಗೂ ಪ್ರಾಶಸ್ಯ ನೀಡಬೇಕು. ಅವರ ಬೇಕು ಬೇಡ, ಇಷ್ಟ ಕಷ್ಟ ಹೀಗೆ ಹತ್ತು ಹಲವು ವಿಚಾರಗಳನ್ನು ಅರಿತರೆ ಉತ್ತಮ. ಯಾವುದೇ ರೀತಿಯ ಮನಸ್ಥಾಪಕ್ಕೆ ಅವಕಾಶ ಇರುವುದಿಲ್ಲ.
ಒಂದು ವೇಳೆ ಮನೆಯವರು ಸದಸ್ಯನ ಮನಸ್ಸುನ್ನು ಅರಿಯುವಲ್ಲಿ ಯಶಸ್ವಿಯಾಗದಿದಲ್ಲಿ ಮನೆಯ ಒಗ್ಗಟ್ಟಿನ ಬೇರಿಗೆ ಕೊಡಲಿ ಏಟು ನೀಡಿದಂತೆ ಆಗುತ್ತದೆ. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ನಡೆದೆ ನಡೆಯುತ್ತದೆ.ಅದನ್ನು ಹೆಚ್ಚಾಗಲು ಅವಕಾಶ ನೀಡಿದೆ. ಸಣ್ಣದರಲ್ಲಿಯೇ ಅದನ್ನು ತಣ್ಣಾಗಾಗಿಸಬೇಕು. ಆಗಲೇ ಮನೆಯು ಬೃಂದಾವನ ಆಗುತ್ತದೆ.
ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್ ಕಂಡಿಷನರ್ (ಎಸಿ), ಏರ್ ಕೂಲರ್ಗಳ…
ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿಮೈತ್ರಿ ಮುಂದುವರಿಯಲಿದ್ದು, ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ…
ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ವೇಣುಗೋಪಾಲಸ್ವಾಮಿ ಬೆಟ್ಟದ ದೇಗುಲ ಆವರಣದ ಬಳಿ ಎಂದಿನಂತೆ ಆಗಮಿಸಿದ ಒಂಟಿ ಆನೆ ವಾಪಾಸ್…
ಸಾಲ ಮಾಡಿ ಬೆಳೆದ ಬೆಳೆಯನ್ನು ಕಾಡಾನೆ ಹಿಂಡುಗಳು ನಾಶ ಮಾಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಪ್ರವೇಶದ್ವಾರದ ಬಳಿ ಭಾರಿ ವಾಹನ ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕಿಲೋಮೀಟರ್ ಗಟ್ಟಲೆ…
ವಾರಾಂತ್ಯದ ರಜೆ ಹಿನ್ನೆಲೆ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಹಸ್ರಾರು ಮಂದಿ ಪ್ರವಾಸಿಗರು ಹಾಗೂ ಭಕ್ತಗಣ ಆಗಮಿಸಿದ್ದರು…