ಸಿಹಿ ಗೆಣಸಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಸಿಹಿ ಗೆಣಸಿನ ಸಾಮಾನ್ಯವಾಗಿ ಅದರ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ. ಈ ಸಿಹಿ ಗೆಣಸನ್ನ ಬೇಯಿಸಿ ಅಥವಾ ಹುರಿದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಇದನ್ನ ಜಾನುವಾರುಗಳ ಆಹಾರವಾಗಿಯೂ ಬಳಸಲಾಗುತ್ತದೆ.

ಈ ಸಿಹಿ ಆಲೂಗೆಡ್ಡೆಯು ಪಿಷ್ಟ ಗ್ಲುಕೋಸ್ ಕೈಗಾರಿಕಾ ಮಧ್ಯ ಮತ್ತು ಸಕ್ಕರೆ ಪಾಕದಂತಹ ಆಹಾರಗಳಲ್ಲಿ ಮೂಲ ಪದಾರ್ಥವಾಗಿ ಬಳಸಲಾಗುತ್ತದೆ. ಸಿಹಿಗೆಣಸು ಅಥವಾ ಸಿಹಿ ಆಲೂಗೆಡ್ಡೆಯು ಐಫೋಮಿಯ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸನ್ನ ಹಲವಾರು ರಾಜ್ಯಗಳಲ್ಲಿ ಹಲವು ರೀತಿಯ ಹೆಸರುಗಳಿಂದ ಕರೆಯಲ್ಪಡುತ್ತದೆ.

ಭಾರತದ ಪ್ರಮುಖ ಗೆಣಸು ಉತ್ಪಾದನಾ ರಾಜ್ಯಗಳು ಹೀಗಿವೆ: ಒರಿಸ್ಸಾ ಬಿಹಾರ್ ಆಂಧ್ರಪ್ರದೇಶ ತೆಲಂಗಾಣ ಅಸ್ಸಾಂ ತಮಿಳುನಾಡು ಪಶ್ಚಿಮ ಬಂಗಾಳ ಮಧ್ಯ ಪ್ರದೇಶ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ.

ಸಿಹಿಗೆಣಸು ಬೇಸಾಯಕ್ಕೆ ಅಗತ್ಯವಿರುವ ಹವಾಮಾನ: ಸಿಹಿ ಆಲೂಗೆಡ್ಡೆ ನಾ ಬೆಚ್ಚಗಿನ ಉಷ್ಣವಲಯದ ಹಾಗೂ ಉಪೋಷ್ಣವಲಯದ ಬೆಳೆಯಾಗಿ ಬೆಳೆಯಲಾಗುತ್ತದೆ. ಇವುಗಳು 21 ಡಿಗ್ರಿ ಸೆಲ್ಷಿಯಸ್ ನಿಂದ 26° ಸೆಲ್ಸಿಯಸ್ವರೆಗಿನ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಈ ಬೆಳಗ್ಗೆ ಕನಿಷ್ಠ ಐದು ತಿಂಗಳ ಕಾಲ ಸಾಕಷ್ಟು ಬಿಸಿಲು ಬೇಕಾಗುತ್ತದೆ ಇದು ಬರ ಪರಿಸ್ಥಿತಿಯನ್ನು ಸಹಿಸಿಕೊಳ್ಳಬಲ್ಲದು ಆದರೆ ನೀರಿನ ನಿಶ್ಚಲತೆಯನ್ನಲ್ಲ. ಈ ಬೆಳೆಯನ್ನ ಸಮುದ್ರ ಮಟ್ಟದಿಂದ 2200 ಮೀಟರ್ ವರೆಗೆ ಬೆಳೆಯಬಹುದು.

ಸಿಹಿಗೆಣಿಸ ಬೇಸಾಯಕ್ಕೆ ಮಣ್ಣಿನ ಅವಶ್ಯಕತೆ: ಸಿಹಿ ಆಲೂಗೆಡ್ಡೆ ಬೇಸಾಯಕ್ಕೆ ಉತ್ತಮವಾದ ಗೆಡ್ಡೆಯ ಬೆಳವಣಿಗೆಗೆ ಜೇಡಿ ಮಣ್ಣು ಅಥವಾ ಸಡಿಲವಾದ ಉಪಮಣ್ಣಿನ ಜೊತೆಗೆ ಚೆನ್ನಾಗಿ ಬರೆದು ಮಾಡಿದ ಮರಳು ಮಿಶ್ರಿತ ಲೋಮ್ ಮಣ್ಣಿನ ಅಗತ್ಯವಿರುತ್ತದೆ.

ಸಿಹಿ ಗೆಣಸು ಬೇಸಾಯದಲ್ಲಿ ನೀರಾವರಿ: ಸತ್ಯ ಬೆಳವಣಿಗೆಯನ್ನು ಅನುಮತಿಸುವ ಮೂಲಕ ಇಳುವರಿಯನ್ನು ಪರಿಶೀಲಿಸುವುದರಿಂದ ಅತಿಯಾದ ನೀರಾವರಿಯನ್ನು ತಪ್ಪಿಸಬಹುದು. ಖಾರೀಫ್ ಋತುವಿನಲ್ಲಿ ಬೆಳೆಗೆ ಕಡಿಮೆ ನೀರಾವರಿ ಅಗತ್ಯವಿರುತ್ತದೆ. ಬಿಸಿ ಶುಷ್ಕ ಋತುವಿನಲ್ಲಿ ಹೆಚ್ಚಿನ ಉತ್ಪಾದನೆಗೆ 8ರಿಂದ 10 ದಿನಗಳ ಮಧ್ಯಂತರದಲ್ಲಿ 10 ರಿಂದ 12 ನೀರಾವರಿ ಅಗತ್ಯವಿರುತ್ತದೆ. ಗಿಡಗಳನ್ನು ನೆಟ್ಟ 40 ರಿಂದ 45 ದಿನಗಳ ನಂತರ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದೆ ಎಂದು ಖಚಿತ ಪಡಿಸಿಕೊಳ್ಳಬೇಕು.

ಈ ಗೆಣಸು ಪಕ್ವತೆಯ ಅವಧಿಯು ಬೆಳೆ ವೈವಿಧ್ಯತೆಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ನಾಲ್ಕು ತಿಂಗಳಿಗೆ ಕೊಯ್ಲಿಗೆ ಸಿದ್ಧವಾಗುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಈ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ ಎಂದರ್ಥ.

ಸಿಹಿ ಗೆಣಸಿನ ಆರೋಗ್ಯ ಪ್ರಯೋಜನಗಳು:

ಸಿಹಿಗೆಣಸು ನಾರಿನಾಂಶದ ಮೂಲವಾಗಿದೆ.

ಈ ಗೆಣಸು ವಿಟಮಿನ್ ಬಿ6 ಇ ಮತ್ತು ಸಿಗಳ ಮೂಲವಾಗಿದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ದೇಹದ ಒತ್ತಡವನ್ನು ನಿವಾರಿಸಲು ಸಹಕಾರಿ

ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ಉರಿಯುತ್ತಿದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ

ಜೀರ್ಣಕ್ರಿಯೆಗೆ ತುಂಬಾ ಉಪಕಾರಿ

ಕ್ಯಾನ್ಸರನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

Ashika S

Recent Posts

ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಂದ ಪಾಪಿ!

ಪ್ರಿಯತಮೇ ಎದುರೆ ಓರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಕೊಂದ ಪಾಪಿ ಪ್ರಿಯತಮ. ಈ ಘಟನೆ ಗೌರಿಬಿದನೂರು ತಾಲ್ಲೂಕಿನ…

14 mins ago

ಬೂತ್​ನಲ್ಲಿ ಲಕ್ಕಿ ಡ್ರಾ : ಮತ ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದ ಉಂಗುರ

ಭೋಪಾಲ್​ನ ಪ್ರತಿ ಬೂತ್​ನಲ್ಲಿ ಲಕ್ಕಿ ಡ್ರಾ ನಡೆಸಲಾಗಿದೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ…

30 mins ago

ಹೊಸ ಕೋವಿಡ್-19 ರೂಪಾಂತರ ಯುಎಸ್‌ನಲ್ಲಿ ಪತ್ತೆ!

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪತ್ತೆಯಾದ ಈ ಭಿನ್ನ ಗುಂಪನ್ನು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ ಕೊರೊನಾ ವೈರಸ್ 2 (SARS-CoV-2) ಫ್ಲರ್ಟ್…

47 mins ago

ಇವಿಎಂ,ಚುನಾವಣಾ ಸಿಬ್ಬಂದಿ ಇದ್ದ ಬಸ್‌ಗೆ ಬೆಂಕಿ : ಯಂತ್ರಗಳು ಡ್ಯಾಮೇಜ್‌

ಚುನಾವಣೆ ಬಳಿಕ ಇವಿಎಂ ಯಂತ್ರಗಳು ಹಾಗೂ ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್​ಗೆ ಬೆಂಕಿ ತಗುಲಿರುವ ಘಟನೆ ಮಧ್ಯಪ್ರದೇಶದ ಬೇತುಲ್​ನಲ್ಲಿ ನಡೆದಿದೆ.…

1 hour ago

ಮತ್ತಷ್ಟು ಮೇಲಕ್ಕೆ ಎರುತ್ತೀರಿ : ಶ್ರೀನಿಧಿ ಶೆಟ್ಟಿಗೆ ದೈವದ ಅಭಯ

ಕೆಜಿಎಪ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದರು. ಮಂಗಳೂರಿನ ಹೊರವಲಯದ ಕಿನ್ನಿಗೋಳಿ…

1 hour ago

ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಮಂಗಳವಾರ…

2 hours ago