News Karnataka Kannada
Saturday, April 27 2024
ವಿಶೇಷ

ಸಿಹಿ ಗೆಣಸಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಸಿಹಿ ಗೆಣಸಿನ ಸಾಮಾನ್ಯವಾಗಿ ಅದರ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ. ಈ ಸಿಹಿ ಗೆಣಸನ್ನ ಬೇಯಿಸಿ ಅಥವಾ ಹುರಿದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಇದನ್ನ ಜಾನುವಾರುಗಳ ಆಹಾರವಾಗಿಯೂ ಬಳಸಲಾಗುತ್ತದೆ.
Photo Credit : Pixabay

ಸಿಹಿ ಗೆಣಸಿನ ಸಾಮಾನ್ಯವಾಗಿ ಅದರ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ. ಈ ಸಿಹಿ ಗೆಣಸನ್ನ ಬೇಯಿಸಿ ಅಥವಾ ಹುರಿದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಇದನ್ನ ಜಾನುವಾರುಗಳ ಆಹಾರವಾಗಿಯೂ ಬಳಸಲಾಗುತ್ತದೆ.

ಈ ಸಿಹಿ ಆಲೂಗೆಡ್ಡೆಯು ಪಿಷ್ಟ ಗ್ಲುಕೋಸ್ ಕೈಗಾರಿಕಾ ಮಧ್ಯ ಮತ್ತು ಸಕ್ಕರೆ ಪಾಕದಂತಹ ಆಹಾರಗಳಲ್ಲಿ ಮೂಲ ಪದಾರ್ಥವಾಗಿ ಬಳಸಲಾಗುತ್ತದೆ. ಸಿಹಿಗೆಣಸು ಅಥವಾ ಸಿಹಿ ಆಲೂಗೆಡ್ಡೆಯು ಐಫೋಮಿಯ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸನ್ನ ಹಲವಾರು ರಾಜ್ಯಗಳಲ್ಲಿ ಹಲವು ರೀತಿಯ ಹೆಸರುಗಳಿಂದ ಕರೆಯಲ್ಪಡುತ್ತದೆ.

ಭಾರತದ ಪ್ರಮುಖ ಗೆಣಸು ಉತ್ಪಾದನಾ ರಾಜ್ಯಗಳು ಹೀಗಿವೆ: ಒರಿಸ್ಸಾ ಬಿಹಾರ್ ಆಂಧ್ರಪ್ರದೇಶ ತೆಲಂಗಾಣ ಅಸ್ಸಾಂ ತಮಿಳುನಾಡು ಪಶ್ಚಿಮ ಬಂಗಾಳ ಮಧ್ಯ ಪ್ರದೇಶ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ.

ಸಿಹಿಗೆಣಸು ಬೇಸಾಯಕ್ಕೆ ಅಗತ್ಯವಿರುವ ಹವಾಮಾನ: ಸಿಹಿ ಆಲೂಗೆಡ್ಡೆ ನಾ ಬೆಚ್ಚಗಿನ ಉಷ್ಣವಲಯದ ಹಾಗೂ ಉಪೋಷ್ಣವಲಯದ ಬೆಳೆಯಾಗಿ ಬೆಳೆಯಲಾಗುತ್ತದೆ. ಇವುಗಳು 21 ಡಿಗ್ರಿ ಸೆಲ್ಷಿಯಸ್ ನಿಂದ 26° ಸೆಲ್ಸಿಯಸ್ವರೆಗಿನ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಈ ಬೆಳಗ್ಗೆ ಕನಿಷ್ಠ ಐದು ತಿಂಗಳ ಕಾಲ ಸಾಕಷ್ಟು ಬಿಸಿಲು ಬೇಕಾಗುತ್ತದೆ ಇದು ಬರ ಪರಿಸ್ಥಿತಿಯನ್ನು ಸಹಿಸಿಕೊಳ್ಳಬಲ್ಲದು ಆದರೆ ನೀರಿನ ನಿಶ್ಚಲತೆಯನ್ನಲ್ಲ. ಈ ಬೆಳೆಯನ್ನ ಸಮುದ್ರ ಮಟ್ಟದಿಂದ 2200 ಮೀಟರ್ ವರೆಗೆ ಬೆಳೆಯಬಹುದು.

ಸಿಹಿಗೆಣಿಸ ಬೇಸಾಯಕ್ಕೆ ಮಣ್ಣಿನ ಅವಶ್ಯಕತೆ: ಸಿಹಿ ಆಲೂಗೆಡ್ಡೆ ಬೇಸಾಯಕ್ಕೆ ಉತ್ತಮವಾದ ಗೆಡ್ಡೆಯ ಬೆಳವಣಿಗೆಗೆ ಜೇಡಿ ಮಣ್ಣು ಅಥವಾ ಸಡಿಲವಾದ ಉಪಮಣ್ಣಿನ ಜೊತೆಗೆ ಚೆನ್ನಾಗಿ ಬರೆದು ಮಾಡಿದ ಮರಳು ಮಿಶ್ರಿತ ಲೋಮ್ ಮಣ್ಣಿನ ಅಗತ್ಯವಿರುತ್ತದೆ.

ಸಿಹಿ ಗೆಣಸು ಬೇಸಾಯದಲ್ಲಿ ನೀರಾವರಿ: ಸತ್ಯ ಬೆಳವಣಿಗೆಯನ್ನು ಅನುಮತಿಸುವ ಮೂಲಕ ಇಳುವರಿಯನ್ನು ಪರಿಶೀಲಿಸುವುದರಿಂದ ಅತಿಯಾದ ನೀರಾವರಿಯನ್ನು ತಪ್ಪಿಸಬಹುದು. ಖಾರೀಫ್ ಋತುವಿನಲ್ಲಿ ಬೆಳೆಗೆ ಕಡಿಮೆ ನೀರಾವರಿ ಅಗತ್ಯವಿರುತ್ತದೆ. ಬಿಸಿ ಶುಷ್ಕ ಋತುವಿನಲ್ಲಿ ಹೆಚ್ಚಿನ ಉತ್ಪಾದನೆಗೆ 8ರಿಂದ 10 ದಿನಗಳ ಮಧ್ಯಂತರದಲ್ಲಿ 10 ರಿಂದ 12 ನೀರಾವರಿ ಅಗತ್ಯವಿರುತ್ತದೆ. ಗಿಡಗಳನ್ನು ನೆಟ್ಟ 40 ರಿಂದ 45 ದಿನಗಳ ನಂತರ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದೆ ಎಂದು ಖಚಿತ ಪಡಿಸಿಕೊಳ್ಳಬೇಕು.

ಈ ಗೆಣಸು ಪಕ್ವತೆಯ ಅವಧಿಯು ಬೆಳೆ ವೈವಿಧ್ಯತೆಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ನಾಲ್ಕು ತಿಂಗಳಿಗೆ ಕೊಯ್ಲಿಗೆ ಸಿದ್ಧವಾಗುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಈ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತದೆ ಎಂದರ್ಥ.

ಸಿಹಿ ಗೆಣಸಿನ ಆರೋಗ್ಯ ಪ್ರಯೋಜನಗಳು:

ಸಿಹಿಗೆಣಸು ನಾರಿನಾಂಶದ ಮೂಲವಾಗಿದೆ.

ಈ ಗೆಣಸು ವಿಟಮಿನ್ ಬಿ6 ಇ ಮತ್ತು ಸಿಗಳ ಮೂಲವಾಗಿದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ದೇಹದ ಒತ್ತಡವನ್ನು ನಿವಾರಿಸಲು ಸಹಕಾರಿ

ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಮತ್ತು ಉರಿಯುತ್ತಿದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ

ಜೀರ್ಣಕ್ರಿಯೆಗೆ ತುಂಬಾ ಉಪಕಾರಿ

ಕ್ಯಾನ್ಸರನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು