Categories: ಅಂಕಣ

ಗಾಂಭೀರ್ಯತೆಯ ನಡೆ ನಮ್ಮದಾಗಿಸಿ ಕೊಂಡು ಯಶಸ್ಸನ್ನು ಸಾಧಿಸೋಣ…

ಇತ್ತೀಚೆಗಷ್ಟೇ ಕಾಡಾನೆ ರಸ್ತೆ ಉದ್ದಕ್ಕೂ ನಡೆಯುತ್ತಿತ್ತು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮೈಕ್ ನಲ್ಲಿ ಎಚ್ಚರಿಕೆಯನ್ನು ನೀಡುತ್ತಾ ಸಾಗುತ್ತಿದ್ದರು. ವಿಶೇಷವೆನೆಂದರೆ ಕಾಡಾನೆಯು ತುಂಬಾನೇ ತಾಳ್ಮೆಯಿಂದ ನಡೆಯುತ್ತಿದ್ದದು.

ಊರ ಜನರೆಲ್ಲ ಕೆಕೇ ಹಾಕುತ್ತಿದ್ದರು ಆದರೆ ಆನೆಗೆ ಇದರ ಚಿಂತೆ ಇರಲಿಲ್ಲ, ಒಂದಷ್ಟು ಜನ ತಮ್ಮ ಮೊಬೈಲಿನಲ್ಲಿ ಈ ದೃಶ್ಯವನ್ನು ಸರೆಹಿಡಿಯುತ್ತಿದ್ದರು. ಆದರೂ ಯಾವುದೇ ಆಕ್ಷೇಪಣೆ ಆನೆಗಿರಲ್ಲಿಲ್ಲ. ತುಂಬಾನೇ ತಾಳ್ಮೆ ಘನತೆ ಗಾಂಭೀರ್ಯತೆಯಿಂದ ನಡೆಯುತ್ತಿತ್ತು.

ಸಾಮನ್ಯವಾಗಿ ಆನೆ ನಡೆಯುವುದೇ ಎಂದಾದರು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ ಒಂದು ಗಾಂಭೀರ್ಯತೆಯು ಕಾಣುತ್ತದೆ. ತನ್ನ ಸುತ್ತ ಮುತ್ತ ಎನು ನಡೆಯುತ್ತಿದೆ ಎಂಬುದರನ ಅರಿವು ಇದಕ್ಕಿರಲ್ಲಿಲ್ಲ. ಇಲ್ಲಿ ನಾವು ಕಲಿಯಬೇಕಿರುವುದು ಸುತ್ತಮುತ್ತ ನಡೆಯುವ ಕೆಟ್ಟ ಸಂಗತಿಗಳು ಅದರಲ್ಲೂ ನಮ್ಮಗೆ ಪೂರಕವಾಗದಿರುವ ವಿಷಯಗಳು ಯಾವುದನ್ನು ಲೆಕ್ಕಿಸದೆ ಮುನ್ನಡೆಯುವುದು.

ನಮ್ಮ ಸುತ್ತ ಮುತ್ತ ಒಂದಿಷ್ಟು ಜನ ನಮ್ಮನೇ ಗುರಿಯಾಗಿಸಿಕೊಂಡು ಮಾತಾಡುವವರಿರುತ್ತಾರೆ. ಒಂದಿಷ್ಟು ಜನ ನಮ್ಮನೇ ಗಮನಿಸುತ್ತಿರುತ್ತಾರೆ. ನಮ್ಮ ನಡೆ, ನುಡಿ, ಬಟ್ಟೆ, ಮತ್ತೆ ನಮ್ಮ ಚಲನವಲಗಳನ್ನು ಗಮನಿಸಿ ನಮ್ಮ ಬಗ್ಗೆ ಒಂದಿಷ್ಟು ಕತೆ ಕಟ್ಟಿ ಮತಾನಾಡಿ ಮಜಾ ತಗೋಳ್ಳುವವರೆ ಹೆಚ್ಚು.

ನಮ್ಮ ಮೈ ಬಣ್ಣ, ಕಣ್ಣು, ತಲೆಕೂದಲು ಎಲ್ಲವು ಕೆಲವರಿಗೆ ಹಾಟ್ ಟಾಪಿಕ್. ನಿತ್ಯ ಬೆಳಗಾದರೆ ಕೆಲವರಿಗೆ ಕೆಲವರ ಬಗ್ಗೆ ತುಂಬಾನೇ ಕುತುಹಲ. ಇಲ್ಲಸಲ್ಲದ ವಿಚಾರದ ಬಗ್ಗೆ ಮಾತ್ತಾನಾಡುವುದು ಎಲ್ಲಿಲ್ಲದ ಖುಷಿ. ಇದು ನಮ್ಮಗೆ ತುಂಬಾನೇ ಕಿರಿಕಿರಿ ಉಂಟುಮಾಡಬಹುದು. ಮನನೊಂದು ಕೋಳ್ಳುವಂತಹ ಸನ್ನಿವೇಶಗಳು ಪದೆಪದೆ ಬರಬಹುದು. ಇನ್ನು ಕೆಲವೊಮ್ಮೆ ಆತ್ಮವಿಶ್ವಾಸವನ್ನೇ ಕೊಲ್ಲಬಹುದು. ಇದೆನ್ನೆಲ್ಲ ಮೀರಿ ಬದುಕುವುದು ಒಂದು ಸಾಹಸವೇ ಸರಿ. ಇವನ್ನೆಲ್ಲ ಕಡೆಗಣಿಸಿ ಉನ್ನತಿಯತ್ತ ಹೆಜ್ಜೆ ಹಾಕುವುದು, ಪ್ರತಿಯೊಂದನ್ನು ಸವಾಲಾಗಿ ಸ್ವಿಕರಿಸಲು ಕಲಿಯಬೇಕು.

ಯಶಸ್ಸಿನ ದಾರಿ ಉದ್ದಕ್ಕು ಇಂತಹ ಅಡೆತಡೆಗಳು ಬೇಕಾದಷ್ಟು ಬರುತ್ತದೆ ಅದನ್ನೆಲ್ಲಾವನ್ನು ಮೀರಿ ನಡೆಯುವುದು ಆತ್ಮ ತೃಪ್ತಿಯನ್ನು ನೀಡುತ್ತದೆ. ಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ಎದುರಿಸಲು ಆನೆ ನಡಿಗೆ ಉತ್ತಮ ಉದಾಹರಣೆಯಾಗಿದೆ.

ನಡೆದಷ್ಟು ಉದ್ದಕ್ಕು ಗಾಂಭೀರ್ಯತೆಯಿಂದ  ನಡೆಯಬೇಕು. ಅದರೆದೆ ಆದ ಘನತೆಯನ್ನು ಕಾಪಾಡಿಕೊಂಡು ಬದುಕುವುದು. ಸ್ವಾಭಿಮಾನ ಯಾವಾಗಲು ನಮ್ಮ ಪ್ರೇರಣಾ ಶಕ್ತಿಯಾಗಿರಲಿ.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

5 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

6 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

6 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

6 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

7 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

7 hours ago