Categories: ಅಂಕಣ

ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’

ಎಸ್. ಎಲ್. ಭೈರಪ್ಪನವರ ಗೃಹಭಂಗವು ಪ್ರಸಿದ್ಧ ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾದ ಕಾದಂಬರಿ. ಈ  ಕಾದಂಬರಿಯು ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆ ಹೊಂದಿದೆ. ‘ಗೃಹಭಂಗ’ವು ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ.

ಇದೊಂದು ಮನೆತನಕ್ಕೆ ಸಂಬಂಧಿಸಿದ ನಂಜಮ್ಮ ಎನ್ನುವ ಹೆಣ್ಣುಮಗಳ ಕಥೆಯಾದರೂ ಆಕೆಯ ಜೊತೆಜೊತೆಗೆ ಸಮಾಜದ ಎಲ್ಲ ಸ್ಥರದವರೊಂದಿಗೂ ಹೆಣೆದುಕೊಂಡಿರುವ ಕಥೆ. ಎಲ್ಲಿ ಬೇಕಾದರೂ, ಯಾರ ಮನೆಯಲ್ಲಿ ಬೇಕಾದರೂ, ಯಾವ ಕಾಲಮಾನದಲ್ಲಿಯಾದರೂ ನಡೆಯಬಹುದಾದ ಕಥೆ. ಹಾಗಾಗಿ ಕಾದಂಬರಿಗೆ ಸಾರ್ವತ್ರಿಕ, ಸಕಾಲಿಕ ಮಾನ್ಯತೆ ದೊರೆತಿದೆ ಎಂದರೇ ಅದರಲ್ಲಿ ಪ್ರಸ್ತಾವಿಸಿರುವ ಸಂಗತಿಗಳು, ಘಟನೆಗಳು, ವ್ಯಕ್ತಿಗಳು, ಸಮುದಾಯಕ್ಕಿರುವ ಪ್ರಸ್ತುತತೆಯೇ ಅದಕ್ಕೆ ಕಾರಣ.

ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ನೈತಿಕತೆ, ಹಕ್ಕು, ಬಾಧ್ಯತೆ, ಆಕೆಯ ನೋವು, ತುಮುಲ, ತಳಮಳ, ಸ್ಥಾನಮಾನ ಕುರಿತ ಅನೇಕ ಕಾದಂಬರಿಗಳು ಈಗಾಗಲೇ ಎಲ್ಲ ಭಾಷೆಗಳಲ್ಲಿ ಬಂದಿದೆ.

ಹೆಣ್ಣಿಗಿರುವ ಕಷ್ಟಗಳೇನು ಎಂದು ಚರ್ಚಿಸುತ್ತಲೇ, ಅದರ ಸುತ್ತ ಬರೆಯುತ್ತಲೇ ದಿನಬೆಳಗಾಗುವುದರೊಳಗೆ ಹಲವರು ಪ್ರಸಿದ್ಧಿ ಪಡೆದುದೂ ವಾಸ್ತವವೇ ಸರಿ. ಆ ನಿಟ್ಟಿನಲ್ಲಿ ನೋಡಿದಾಗ ಇದೂ ಕೂಡ ಅದೇ ಸಾಲಿನಲ್ಲಿ ನಿಲ್ಲಬಲ್ಲ ಒಂದು ಸುಧೀರ್ಘ ಸಾಮಾಜಿಕ ಮತ್ತು ಕೌಟುಂಬಿಕ ಕಾದಂಬರಿ ಎಂದು ಹೇಳಬಹುದಾದರೂ ಅದರಲ್ಲಿನ ವೈಶಿಷ್ಟ್ಯತೆಗಳು ಇದನ್ನೊಂದು ಸಾಮಾನ್ಯ ಕಾದಂಬರಿ ಎಂದು ವರ್ಗೀಕರಣ ಮಾಡಲು ಬಿಡುವುದಿಲ್ಲ. ಕೇವಲ ಸ್ತ್ರೀ ಸ್ವಾತಂತ್ರ್ಯ ಮತ್ತು ಆಕೆಯ ಸುತ್ತ ಹೆಪ್ಪುಗಟ್ಟಿ ನಿಂತಿರುವ ಸಮಸ್ಯೆಗಳ ಕುರಿತಷ್ಟೇ ಕಾದಂಬರಿ ತನ್ನ ನಿಲುವನ್ನು ಬಿಂಬಿಸುವುದಿಲ್ಲ. ಸಮಾನತೆ, ಅಸಮಾನತೆ ಕುರಿತ ವ್ಯಾಖ್ಯಾನವಷ್ಟೇ ಕಥೆಯ ಕೇಂದ್ರಬಿಂದುವಲ್ಲ. ಅಷ್ಟೇ ಆಗಿದಿದ್ದರೆ ಇಷ್ಟೆಲ್ಲಾ ಹೇಳುವ ಪ್ರಮೇಯವೂ ಇರುತ್ತಿರಲಿಲ್ಲ. ಒಂದು ಕಾಲದ ಒಟ್ಟೂ ಸಮುದಾಯದ ನಿರ್ದಿಷ್ಟ ಜೀವನ ಮಾಪನವನ್ನು ಸಮಗ್ರವಾಗಿ ಬಿಂಬಿಸುವ ಕಾದಂಬರಿ ಇದಾಗಿದೆ.

ಸಂಬಂಧಗಳ ಮೌಲ್ಯ ಅಪಮೌಲ್ಯವಾಗುತ್ತಿರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾದಂಬರಿ ಹೇಗೆ ಸಂಬಂಧಗಳ ಅವಶ್ಯಕತೆಯನ್ನು, ಅದರ ಮಹತ್ವವನ್ನು ನಿರ್ದಿಷ್ಟವಾಗಿ ಪ್ರತಿಪಾದಿಸುತ್ತವೆ ಎಂದು ಸ್ಪಷ್ಟವಾಗಿ ಇಲ್ಲಿ ಹೇಳಲಾಗಿದೆ.

Sneha Gowda

Recent Posts

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

8 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

31 mins ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

43 mins ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

55 mins ago

ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ…

2 hours ago

ಇಂದು ಕೊಡಗು,ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮೇ 9ರಂದು ಬಿರುಗಾಳಿಯೊಂದಿಗೆ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ…

2 hours ago