Categories: ಅಂಕಣ

ಅಣ್ಣ-ತಂಗಿ ಸಂಬಂಧ ಎರಡು ದೇಹ ಒಂದೇ ಆತ್ಮ ಇದ್ದಂತೆ!

ಪ್ರತಿಯೊಂದು ಸಂಬಂಧವು ತನ್ನದೇ ಆದ ರೀತಿಯಲ್ಲಿ ವಿಶೇಷವಾಗಿದೆ. ಪ್ರತಿಯೊಂದು ಅಣ್ಣ ತಂಗಿಯ ಸಂಬಂಧ ಮಧುರ ಮತ್ತು ಪ್ರೀತಿಯಿಂದ ಕೂಡಿರುತ್ತದೆ. ಪ್ರತಿಯೊಬ್ಬ ಅಣ್ಣ ತಂಗಿಯು ಜಗಳವಾಡುತ್ತಾರೆ ಮತ್ತು ಅಷ್ಟೇ ಪ್ರೀತಿಯಿಂದ ಒಬ್ಬರೊಬ್ಬರು ಗೌರವಿಸುತ್ತಾರೆ. ಒಬ್ಬ ಅಣ್ಣ ತನ್ನ ತಂಗಿಯನ್ನು ಎಲ್ಲಾ ರೀತಿಯಲ್ಲೂ ರಕ್ಷಿಸುತ್ತಾನೆ.

ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯ ಸಂಬಂಧ ಪ್ರೀತಿ ಕೀಟಲೆಯ ಸಂಬಂಧ ಆಗಿದ್ದರೂ ಕೂಡ ಒಬ್ಬರಿಗೊಬ್ಬರು ಪ್ರಾಣ ನೀಡಲು ರೆಡಿ ಇರುತ್ತಾರೆ. ಆದರೆ ತಮ್ಮ ಅತೀ ಪ್ರೀತಿಯ ಅಥವ ಅಮೂಲ್ಯವಾದದನ್ನು ಹಂಚಿಕೊಳ್ಳಲು ರೆಡಿ ಇರುವುದಿಲ್ಲ. ಕೇಳದೆ ತೆಗೆದುಕೊಂಡರೆ ಮಹಾಯುಧ್ಧ ಗ್ಯಾರಂಟಿ. ಅಪ್ಪ ಅಮ್ಮ ಬೈದಾಗ ಒಬ್ಬರಿಗೊಬ್ಬ ಖುಷಿಪಡುತ್ತಾರೆ ಮತ್ತು ಅದೇ ವಿಷಯಕ್ಕೆ ಕಾಲೇಳೆಯುತ್ತಿರುತ್ತಾರೆ. ಕೀಟಲೆ ಮಾಡಿ ಸದಾ ಅಪ್ಪ ಅಮ್ಮನ ಹತ್ರ ದೂರು ಹೇಳಲು ಯಾವಾಗಲೂ ರೆಡಿ.

ಪರಸ್ಪರ ಒಬ್ಬರಿಗೋಬ್ಬರು ತಮ್ಮ ರಹಸ್ಯವನ್ನು ಬಿಚ್ಚಿಡಲು ಸೂಕ್ತ ವ್ಯಕ್ತಿಗಳಾಗಿರುತ್ತಾರೆ. ಯಾರೊಂದಿಗೂ ಬಿಟ್ಟುಕೊಡುದಿಲ್ಲ ಎಂಬ ದೃಡನಂಬಿಕೆ ಇರುತ್ತದೆ. ಇವರಿಗಿಂತ ವಿಶ್ವಸಾರ್ಹನೀಯ ವ್ಯಕ್ತಿ ಯಾರು ಇಲ್ಲ. ಸಿಕ್ರೇಟ್‌ನ್ನು ಸಿಕ್ರೇಟ್ ಆಗಿ ಇಡುವುದರಲ್ಲಿ ನಿಪುಣರು ಆಗಿರುವ ಇವರು, ತಮ್ಮ ಬೇಡಿಕೆಯನ್ನು ಇಡೇರಿಸಿಲ್ಲ ಅಂದರೆ ಅಷ್ಟೆ ಕತೆ. ಕೆಲವೊಮ್ಮೆ ಬ್ಲಾಕ್‌ಮೇಲ್ ಮಾಡಿ ತಮ್ಮ ಬೇಡಿಕೆಯನ್ನು ಇಡೇರಿಸುವುತ್ತಾರೆ.

ಅಣ್ಣನ್ನನು ಸುಲಿಗೆ ಮಾಡುವ ತಂಗಿ ನ್ಯಾಯ ಸಮ್ಮತವಾದ ಪ್ರೀತಿ ಅಡಕವಾಗಿರುತ್ತದೆ ಹೊರತು ಬೇರೆನೂ ಅಲ್ಲ. ಅಣ್ಣ ಜೇಬಿಗೆ ಕತ್ತರಿ ಹಾಕುವುದೆಂದರೆ ತುಂಬಾನೇ ಇಷ್ಟ.ಜಗತ್ತಿನಲ್ಲಿ ತನಗಿಂತ ಅದೃಷ್ಟವಂತ ಬೇರೆ ಯಾರು ಇಲ್ಲ ಯಾಕೆಂದರೆ ನನಗೆ ಒಬ್ಬಳು ತಂಗಿ ಇದ್ದಾಳೆ. ತಂಗಿಯ ನೋವನ್ನು ನೋಡೊದಕ್ಕೆ ಆಗದಿರುವವನು, ತಂಗಿಯ ಕಣ್ಣೀರನ್ನು ಸಹಿಸೋಕ್ಕೆ ಆಗದೆ ಇರುವವನು ಅಣ್ಣ.

ಒಬ್ಬರಿಗೊಬ್ಬರು ಕಿತ್ತಡಾದ ದಿನವಿಲ್ಲ ಆದರೆ ಒಬ್ಬರ ಪರ ನಿಲ್ಲಲೂ ಸದಾ ಮುಂದೆ ಇರುತ್ತಾರೆ. ತಂಗಿ ಇಷ್ಟಪಟ್ಟಿದನ್ನು ಕಷ್ಟ ಪಟ್ಟಾದರು ತಂದು ಕೊಡುತ್ತಾನೆ ಅಣ್ಣ. ತಂಗಿಗೆ ಮದುವೆ ಗೊತ್ತಾದ ಕ್ಷಣದಿಂದ ಖುಷಿಯಿಂದ ಕುಣಿಯುತ್ತಾನೆ. ಮದುವೆಯ ದಿನ ತಂಗಿನ ಗಂಡನ ಮನೆಗೆ ಕಳಿಸುವಾಗ ಎಲ್ಲರಿಗಿಂತ ಹೆಚ್ಚು ಸಂಕಟ ಪಡುವವನು ಈ ಅಣ್ಣನೇ. ಇನ್ನು ತಂಗಿನೂ ಕಮ್ಮಿ ಇಲ್ಲ ಅಣ್ಣನಿಗೆ ಮದುವೆ ಆಯಿತ್ತು ಎಂದರೆ ನನ್ನ ಮೇಲಿನ ಪ್ರೀತಿ ಕಮ್ಮಿ ಆಗುತ್ತದೆ ಎಂದು ತಪ್ಪು ಕಲ್ಪನೆಯಲ್ಲಿ ಅತ್ತಿಗೆಯ ಮೇಲೆ ಅಸೂಯೆ ಪಡುತ್ತಾಳೆ.

ಅಣ್ಣ ತಂಗಿಯ ಸಂಬಂಧ ಅತೀ ಪ್ರೀತಿಯ ಮತ್ತು ತುಂಬಾನೇ ಹಚ್ಚಿಕೊಂಡಿರುವ ಸಂಬಂಧವಾಗಿದೆ. ನಮ್ಮ ಜೀವನದಲ್ಲಿ ಒಬ್ಬ ಅಣ್ಣ ಅಥಾವ ಒಬ್ಬ ತಂಗಿ ಹುಟ್ಟಿರಲು ತಾನು ತುಂಬಾನೇ ಅದೃಷ್ಟ ಮಾಡಿರುತ್ತೇವೆ ಎಂದು ಕೋಳ್ಳುವವರು ತುಂಬಾ ಮಂದಿ.

Gayathri SG

Recent Posts

ಕಡಬ: ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು…

15 mins ago

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ

ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

15 mins ago

ಮಂಜೂರಾದ ಜಮೀನು ಪಿಟಿಸಿಎಲ್ ಕಾಯಿದೆಯಡಿ ಮರು ಸ್ಥಾಪನೆ ಇಲ್ಲ

ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಭೂ ನ್ಯಾಯಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ…

27 mins ago

ಗೆಳಯನಿಗೆ ಸಾತ್‌ ನೀಡಲು ಹೋಗಿದ್ದ ಅಲ್ಲು ವಿರುದ್ಧ ಕೇಸ್ ದಾಖಲು

ಪುಷ್ಪಾ-2 ರಿಲೀಸ್​ ಕ್ರೇಜ್​ನಲ್ಲಿರೋ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್…

31 mins ago

ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆ : ನಾಲ್ಕನೇ ಆರೋಪಿ ಅರೆಸ್ಟ್‌

ಕೆನಡಾದಲ್ಲಿ ಕಳೆದ ವರ್ಷ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದ, ಖಲಿಸ್ತಾನಿ ಪರ ಹೋರಾಟಗಾರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ನನ್ನು ಹತ್ಯೆ…

52 mins ago

ಆರು ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಬದರಿನಾಥ

ಉತ್ತರಾಕಾಂಡ ಚಮೋಲಿಯಲ್ಲಿರುವ ಬದರಿನಾಥ ಬಾಗಿಲನ್ನು ಇಂದು(ಬಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು. ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ…

1 hour ago