‘ಉಂಗುರ’ವನ್ನು ಇಂದು ಯುವತಿಯರು ಫ್ಯಾಷನ್ಗಾಗಿ ಧರಿಸುತ್ತಾರೆ. ಅದರೆ ಉಂಗುರ ಕೇಲವ ಫ್ಯಾಷನ್ ಆಭರಣ ಮಾತ್ರವಲ್ಲ, ಸಂಪ್ರದಾಯವೂ ಹೌದು, ಸಂಸ್ಕೃತಿಯೂ ಹೌದು. ಹಿಂದೂ ಸಂಪ್ರದಾಯದಲ್ಲಿ ನಾವು ಧರಿಸುವ ಪ್ರತಿಯೊಂದು ಆಭರಣಕ್ಕೂ ಕಾರಣಗಳು ಇದ್ದೇ ಇರುತ್ತದೆ. ಹಾಗೆಯೇ ಉಂಗುರ ಧರಿಸುದರ ಹಿಂದೆಯೂ ಕಾರಣ ಇದೆ.
ಹೆಣ್ಣು ಗಂಡು ಮದುವೆಯಾಗೂ ಮೊದಲು ನಿಶ್ಚಿತಾರ್ಥ ಕಾರ್ಯಕ್ರಮ ಮಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ. ನಿಶ್ವಿತಾರ್ಥದ ದಿನ ಗಂಡು ಹೆಣ್ಣು ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. ನಿಶ್ವಿತಾರ್ಥದ ದಿನ ಗಂಡು ಹೆಣ್ಣು ಬದಲಾಯಿಸಿಕೊಳ್ಳುವ ಉಂಗುರ ಪ್ರೀತಿ, ವಿಶ್ವಾಸದ ಸಂಕೇತವಾಗಿರುತ್ತದೆ.
ಇನ್ನೂ ನಿಶ್ಚಿತಾರ್ಥದ ದಿನ ವೃತ್ತಾಕಾರದ ಉಂಗುರ ಹಾಕುವುದರ ಹಿಂದೆಯೂ ಇಂದು ಕಾರಣವಿದೆ. ವೃತ್ತಾಕಾರಕ್ಕೆ ಅಂತ್ಯ ಅನ್ನೋದೇ ಇರೋದಿಲ್ಲ ಹಾಗೆಯೇ ಎಂಥ ಸ್ಥಿತಿಯಲ್ಲಿಯೂ ವೈವಾಹಿಕ ಜೀವನ ಅಂತ್ಯ ಕಾಣದಿರಲಿ ಎನ್ನುವುದಕ್ಕಾಗಿ ನಿಶ್ವಿತಾರ್ಥದ ಉಂಗುರ ವೃತ್ತಾಕಾರದಲ್ಲಿ ಇರಬೇಕು ಅನ್ನೋದು ಜನರ ನಂಬಿಕೆ.
ಬೆಳ್ಳಿ ಉಂಗುರವನ್ನು ಧರಿಸುದರಿಂದ ಹಲವಾರು ಉಪಯೋಗಗಳಿವೆ. ಬೆಳ್ಳಿ ಅತ್ಯಂತ ಪವಿತ್ರ ಮತ್ತು ಸಾತ್ವಿಕ ಲೋಹವೆಂದು ಪರಿಗಣಿಸಲಾಗಿದೆ. ಬೆಳ್ಳಿಯು ದೇಹದ ನೀರಿನ ಅಂಶವನ್ನು ನಿಯಂತ್ರಿಸುತ್ತದೆ. ಇದರೊಂದಿಗೆ ಕಫ, ಪಿತ್ತ, ವಾತ ಸಮಸ್ಯೆ ನಿವಾರಣೆಗೂ ಸಹಕಾರಿಯಾಗಿದೆ. ಆದ್ದರಿಂದ ಬೆಳ್ಳಿ ಉಂಗುರ ಧರಿಸುವುದು ಉತ್ತಮ.
ಆಮೆಗೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಇದೇ ಕಾರಣಕ್ಕೆ ಆಮೆ ಉಂಗುರ ಹಾಕುವವರ ಸಂಖ್ಯೆ ಹೆಚ್ಚು. ಈ ಆಮೆ ಉಂಗುರ ಧರಿಸುದರಿಂದ ಆತನ ಜೀವನದಲ್ಲಿ ಸಂತೋಷ ಮತ್ತು ಸೌಕರ್ಯ ಹೆಚ್ಚುತ್ತದೆ. ಮಾತ್ರವಲ್ಲದೆ ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಾರೆ ಎಂಬ ದೃಢವಾದ ನಂಬಿಕೆಯು ಜನರಲ್ಲಿದೆ.
ಆಮೆಯ ಉಂಗುರ ಧರಿಸುವಾಗ ಎಚ್ಚರವಹಿಸಬೇಕು. ಆಮೆಯ ಉಂಗುರ ಧರಿಸುವಾಗ ಮುಖವು ಧರಿಸಿದವರ ಕಡೆಗೆ ಇರಬೇಕು. ಆಮೆಯ ಮುಖ ವಿರುದ್ಧ ದಿಕ್ಕಿಗೆ ಇದ್ದರೆ ಆರ್ಥಿಕ ನಷ್ಟವಾಗುತ್ತದೆ. ಈ ಉಂಗುರವನ್ನು ಬಲಗೈಯ ಮಧ್ಯದ ಬೆರೆಳಿಗೆ ಅಥವಾ ಅದರ ಜೊತೆಗಿನ ತೋರು ಬೆರಳಿಗೆ ಧರಿಸಬೇಕು.