ಮಂಗಳೂರು: ಸಂತ ಆಂತೋನಿಯ ಆಶ್ರಮ, ಜೆಪ್ಪು ಇದರ ಪಾಲಕರಾದ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಪ್ರಥಮ ದಿವಸದ ತ್ರಿದುಮ್ ಪ್ರಾರ್ಥನೆ ಯು ಜೂ.10 ಶುಕ್ರವಾರದಂದು ಮಿಲಾಗ್ರಿಸ್ ಚರ್ಚಿನಲ್ಲಿ ಜರುಗಿತು.
ಸಂತ ಜೋಸೆಫ್ ಚರ್ಚಿನ ಪ್ರಧಾನ ಧರ್ಮಗುರುಗಳು ನಿಂದನೀಯ ಗುರು ಮ್ಯಾಕ್ಸಿಮ್ ಡಿಸೋಜ, ರವರು ಬಲಿಪೂಜೆಯನ್ನು ಅರ್ಪಿಸಿ ಪ್ರವಚನವನ್ನು ನೀಡಿದರು. ಇಂದು ಕುಟುಂಬದ ಎಲ್ಲ ರೋಗಿಗಳಿಗೋಸ್ಕರ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಆಶ್ರಮದ ನಿರ್ದೇಶಕರಾದ ವಂದನೀಯ ಗುರು ಜೆ. ಬಿ. ಕ್ರಾಸ್ತಾ, ವಂದನೀಯ ಗುರು ರೂಪೇಶ್ ತಾವ್ರೊ ಸಹ ಬಲಿಪೂಜೆ ಅರ್ಪಿಸಿದರು. ನೂರಾರು ಭಕ್ತಾಧಿಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು.