ಕಾರವಾರ: ಹಿಂದಿನ ಕಾಲದಲ್ಲಿ ಕೇವಲ ವಿಶ್ವಕರ್ಮ ಸಮುದಾಯಕ್ಕೆ ಮಾತ್ರ ಸಿಮೀತವಾದ ಕಲೆ ಇಂದು ಯಾವ ವ್ಯಕ್ತಿಗೆ ಆಸಕ್ತಿ ಇದೇಯೋ ಅಂತಹವರು ಇದರಲ್ಲಿ ತೊಡಗಿಕೊಳ್ಳುವ ಅವಕಾಶವಿದೆ ಎಂದು ಕಾರವಾರ ಸಹಾಯಕ ಆಯುಕ್ತೆ ಜಯಲಕ್ಷೀ ರಾಯಕೊಡ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಪರಂಪರೆಯ ಕಲೆ, ವಾಸ್ತು ಶಿಲ್ಪಗಳಿಗೆ ಇವರ ಕೊಡುಗೆ ಅಪಾರ ಶಿಥಿಲವಾದ ವಾಸ್ತುಶಿಲ್ಪಗಳನ್ನು ಇಂದಿಗೂ ಸರಿಪಡಿಸಲು ಆಗುತ್ತಿಲ್ಲ. ಇಂದು ಶಿಲ್ಪ ಕಲೆಗಳ ಕೊರತೆಯಿದೆ. ಅಂದಿನ ಕಾಲದಲ್ಲಿ ಶಿಲ್ಪ ಕಲಾಕಾರರಿಗೆ ಇರುವ ಪ್ರಾಮುಖ್ಯತೆ ಇಂದು ಇಲ್ಲವೇನು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯ್ಕ, ಕಾರವಾರ ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವಾಸುದೇವ ಆಚಾರಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.