ಆರೋಗ್ಯ

ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುವುದು ಹೇಗೆ

ಚಳಿಗಾಲದ ತಂಪು ವಾತಾವರಣ ಯಾವಗಲೂ ಇಷ್ಟಪಡುವ ವಾತಾವರಣವಾಗಿದೆ. ಪ್ರತಿಯೊಬ್ಬನಿಗೂ ಈ ವಾತಾವರಣ ಸ್ವಾಗತಾರ್ಹವಾಗಿದೆ. ಈ ಇಷ್ಟಪಡುವ ವಾತಾವರಣ ನಮ್ಮ ಚರ್ಮಕ್ಕೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇದು ನಮ್ಮ ಚರ್ಮವನ್ನು ತೇವಾಂಶವಿಲ್ಲದಂತೆ ಶುಷ್ಕವಾಗಿ ಮಾಡುತ್ತದೆ. ಇಂತಹ ಸಮಯದಲ್ಲಿ ನಾವು ಚರ್ಮದ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.

ಚರ್ಮದ ಆರೈಕೆಗೆ ಕೆಲವು ಸಲಹೆಗಳು

• ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ. ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ದೇಹಕ್ಕೆ ತುಂಬಾ ಹಿತಕರವಾಗಿರುತ್ತದೆ ಆದರೆ ಚರ್ಮಕ್ಕೆ ಇದು ತುಂಬಾ ಹಾನಿಯುಂಟುಮಾಡುತ್ತದೆ. ಬಿಸಿ ನೀರು ಶುಷ್ಕ ತ್ವಚೆಯನ್ನು ಹೆಚ್ಚು ಉಲ್ಬಣಗೊಳಿಸುತ್ತದೆ. ಹೀಗಾಗಿ ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ.

• ಸಾಕಷ್ಟು ನೀರು ಕುಡಿಯಿರಿ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ತೇವಾಂಶ ಕಡಿಮೆ ಇರುವುದರಿಂದ ನಮ್ಮ ದೇಹಕ್ಕೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ ಹೀಗಾಗಿ ನಮ್ಮ ದೇಹವನ್ನು ಹಾಗೂ ಚರ್ಮವನ್ನು ಶುಷ್ಕತೆಯಿಂದ ಕಾಪಾಡಿಕೊಳ್ಳಬಹುದು.

• ದೇಹ ಮುಚ್ಚಿಕೊಳ್ಳುವ ಉಡುಪು ಧರಿಸಿ. ಚಳಿಗಾಲದಲ್ಲಿ ಯುವಿ ಕಿರಣಗಳು ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಗಳಿರುವುದರಿಂದ ಸನ್ ಸ್ಕ್ರೀನ್ ಬಳಸಿ ಹಾಗೂ ಸೂರ್ಯನ ಕಿರಣ ಬೀಳುವ ದೇಹದ ಭಾಗಗಳನ್ನು ಮುಚ್ಚಿಕೊಳ್ಳಿ.

• ಬಾಡಿಲೋಶನ್ ಅಥವಾ ಎಣ್ಣೆಯನ್ನು ಉಪಯೋಗಿಸಿ. ದೇಹದ ಚರ್ಮ ಒಣಗಿದಾಗ ಬಾಡಿಲೋಷನ್ ಅಥವಾ ಎಣ್ಣೆಯನ್ನು ಬಳಸಿ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.

ಚಳಿಗಾಲದಲ್ಲಿ ಆಹಾರ ಪದ್ದತಿ

ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಕರಿದ, ಹುರಿದ, ಜಂಕ್‌ಫುಡ್‌ಗಳ ಅತಿಯಾದ ಸೇವನೆಯನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಈರೀತಿಯ ಆಹಾರ ನಮ್ಮಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯ ಆಹಾರ ಪದಾರ್ಥಗಳು ನಮ್ಮ ಮುಖದ ಮೇಲೆ ಮೊಡವೆಯಂತಹ ತೊಂದರೆಗಳನ್ನು ಉಂಟುಮಾಡುತ್ತದೆ.

ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡಲು ಆಹಾರದಲ್ಲಿ ಮುಖ್ಯವಾಗಿ ತರಕಾರಿಗಳು, ಹಣ್ಣುಗಳನ್ನು ಬಳಸುವುದು ಉತ್ತಮ ಮುಖ್ಯವಾಗಿ ಕ್ಯಾರೆಟ್, ಬಿಟ್ರೂಟ್, ಹಸಿರು ಎಲೆ ತರಕಾರಿಗಳು, ಬ್ರೋಕೊಲಿ, ಹಾಗೂ ಹಣ್ಣುಗಳಲ್ಲಿ ಸೇಬು, ನಿಂಬೆ, ಕಿತ್ತಳೆ, ಬಾಳೆಹಣ್ಣು, ದಾಳಿಂಬೆಗಳನ್ನು ಸೇರಿಸಿಕೊಳ್ಳುವುದು ಉತ್ತಮ.

Ashika S

Recent Posts

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

3 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

18 mins ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

38 mins ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

1 hour ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

1 hour ago

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

2 hours ago