News Karnataka Kannada
Thursday, May 02 2024
ಆರೋಗ್ಯ

ಬೇಸಿಗೆಯಲ್ಲಿ ಜಾಂಡೀಸ್ ಕಾಡಬಹುದು ಹುಷಾರ್!

Jaundese
Photo Credit : News Kannada

ಕಾಲಕ್ಕೆ ತಕ್ಕಂತೆ ನಮ್ಮ ಮೇಲೆ ವಿವಿಧ ಕಾಯಿಲೆಗಳು ದಾಳಿ ಮಾಡುತ್ತವೆ. ಕೊರೊನಾದಿಂದ ನಾವೆಷ್ಟು ಬಳಲಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಕೊರೊನಾ ಭಯದಲ್ಲಿದ್ದ ಕೆಲವರು ಕೊರೊನಾ ನಿಯಂತ್ರಣದತ್ತ ಮುಂಜಾಗ್ರತೆ ವಹಿಸಿದ್ದರೂ ಇತರೆ ರೋಗಗಳು ಕಾಡಿದ್ದವು.

ಬಹಳಷ್ಟು ಕಾಯಿಲೆಗಳು ನಮ್ಮ ವಾತಾವರಣದ ಬದಲಾವಣೆ, ಅಶುಚಿತ್ವ, ಅಶಿಸ್ತಿನಿಂದಲೂ ಬರುತ್ತದೆ. ಬೇಸಿಗೆಯಲ್ಲಂತು ರೋಗಗಳು ಸ್ವಲ್ಪ ಜಾಸ್ತಿ ಕಾಡುತ್ತದೆ. ಹೀಗೆ ಕಾಡುವ ರೋಗಗಳಲ್ಲಿ ಜಾಂಡೀಸ್ ಕೂಡ ಒಂದಾಗಿದ್ದು, ಈ ರೋಗ ಬೇಸಿಗೆಯಲ್ಲಿ ಅದರಲ್ಲೂ ನೀರಿನಿಂದ ಹರಡುವ ಒಂದು ರೋಗವಾಗಿದೆ.

ಈ ರೋಗ ಏಕೆ ಬೇಸಿಗೆಯಲ್ಲಿ ಕಾಡುತ್ತದೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ವೈದ್ಯರು ನೀಡುವ ಉತ್ತರ ಏನೆಂದರೆ?

ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥ,  ಅಶುದ್ಧ ನೀರಿನಲ್ಲಿ ಜಾಂಡೀಸ್ ಗೆ ಸಂಬಂಧಿಸಿದ ವೈರಸ್‍ ಸುಲಭವಾಗಿ ಹರಡುತ್ತದೆ. ಜಾಂಡೀಸ್ ಕಾಯಿಲೆ ಕುರಿತಂತೆ ಕೆಲವೊಂದು ಸಲಹೆ ಮತ್ತು ಮಾಹಿತಿ ನೀಡುವ ವೈದ್ಯರು ಈ  ರೋಗವು ಹೆಪಾಟೈಟಿಸ್ ‘ಎ’ ಎಂಬ ‘ಪಿ’ ಪಿಕಾರ್ನೂ ವೈರಸ್‌ನಿಂದ ಹರಡುತ್ತದೆ. ಈ ವೈರಸ್  ಲಿವರ್‌ಗೆ ತಲುಪುತ್ತದೆ. ಅಲ್ಲಿ ವೃದ್ಧಿಯಾಗಿ 30 ದಿನಗಳ ಬಳಿಕ ರೋಗದ ಲಕ್ಷಣಗಳನ್ನು ಹೊರ ಹಾಕುತ್ತದೆ. ರೋಗದ ತೀವ್ರತೆ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ದೊಡ್ಡವರಲ್ಲಿ ಹೆಚ್ಚಾಗಿರುತ್ತದೆ. ಹೆಪಾಟೈಟಿಸ್ ‘ಎ’ ಯ ರೋಗ ಲಕ್ಷಣಗಳು 3 ವಾರದವರೆಗೂ ಇದ್ದು, ಸಮಾರು 9 ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಕೆಲವರಲ್ಲಿ ವಾಸಿಯಾಗಲು 3 ತಿಂಗಳು ಬೇಕಾಗುತ್ತದೆಯಂತೆ.

ರೋಗ ಲಕ್ಷಣಗಳು ಕಂಡುಬರುವ 2 ವಾರಗಳವರೆಗೆ ಈ ರೋಗಾಣು ಮಲದಲ್ಲಿ ವಿಸರ್ಜನೆಯಾಗುತ್ತಿರುತ್ತದೆ. 3 ವಾರಗಳಲ್ಲಿ ಈ ವೈರಸ್ ತಾವಾಗಿಯೇ ಸ್ವಯಂ ನಿರ್ನಾಮಗೊಂಡು, ರೋಗಿ ತಾನಾಗಿಯೇ ಗುಣಮುಖವಾಗುತ್ತಾನೆ ಇದನ್ನು ವೈದ್ಯಕೀಯ ವಲಯದಲ್ಲಿ “ಸೆಲ್ಫ್ ಲಿಮಿಟಿಂಗ್” ಎನ್ನುತ್ತಾರೆ. ಮುಖ್ಯವಾಗಿ ಹೊಟ್ಟೆ ಹಸಿವು ಕಡಿಮೆಯಾಗುವುದು, ಬಲಗಡೆ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬರುವುದು, ಆಗಾಗ ವಾಂತಿಯಾಗುವದು  ಮತ್ತು ವಿಪರೀತ ಸುಸ್ತು ಸಂಕಟವಾಗುವದು ರೋಗದ ಲಕ್ಷಣಗಳಾಗಿವೆ. ನಾಟಿ ಔಷಧಿ, ಅಲೋಪತಿ ಔಷಧಿ, ಯಾವುದೇ ಚಿಕಿತ್ಸೆ ಮಾಡಿದರೂ ದಿನಕ್ಕೆ 3 ಗ್ಲಾಸ್ ನಿಂಬೆ ಹಣ್ಣು, ಕಿತ್ತಳೆ, ಮೂಸಂಬಿ ಅಥವಾ ಕಬ್ಬಿನ ರಸವನ್ನು ಮತ್ತು 3 ಚಮಚ ಗ್ಲೂಕೋಸ್ ಹಾಕಿ ಕರಗಿಸಿ ಕುಡಿದರೆ ಈ ರೋಗ ಬೇಗ ಗುಣಮುಖವಾಗುತ್ತದೆ.

ಜಾಂಡೀಸ್ ಮುಖ್ಯವಾಗಿ ಅಶುಚಿತ್ವ, ಕಲುಷಿತ ನೀರಿನಿಂದ ಹರಡುವುದರಿಂದ ಪ್ರತಿಯೊಬ್ಬರೂ ಶುಚಿತ್ವಕ್ಕೆ ಆದ್ಯತೆ ನೀಡುವುದು, ಮಲವಿಸರ್ಜನೆ ಬಳಿಕ ಸೋಪಿನಿಂದ ಚೆನ್ನಾಗಿ ಕೈತೊಳೆಯುವುದು, ಕುದಿಸಿ ಆರಿಸಿದ ನೀರನ್ನು ಕುಡಿಯುವುದು, ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡುವುದು ಹೀಗೆ ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಂಡರೆ ಜಾಂಡೀಸ್ ಬಾರದಂತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು