ಉಜಿರೆ: ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತೇಜಚಿನ್ಮಯ ಹೊಳ್ಳ 2023 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 621 ಅಂಕಗಳನ್ನು ಗಳಿಸಿರುತ್ತಾನೆ. ಈತ ಕಳೆದ ಜನವರಿ ತಿಂಗಳಲ್ಲಿ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ್ದ ಪರೀಕ್ಷಾ ಪೆ ಚರ್ಚ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುತ್ತೂರಿನ ಹೆಮ್ಮೆಯ ಕುವರ. ಈತ ಕಳೆದ ಡಿಸೆಂಬರ್ ತಿಂಗಳಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಕಲೋತ್ಸವ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ತೃತೀಯ ಬಹುಮಾನವನ್ನು ಪಡೆದು ಕಂಚಿನ ಪದಕವನ್ನು ಪಡೆದಿದ್ದಾನೆ.
ಅಲ್ಲದೆ 2022-23 ನೇ ಸಾಲಿನಲ್ಲಿ ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ 600ರಲ್ಲಿ 575(ಶೇಕಡಾ 96) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ.ತೇಜ ಚಿನ್ಮಯ ಹೊಳ್ಳ ಪುತ್ತೂರಿನ ಹೆಸರಾಂತ ಸಂಗೀತ ವಿದುಷಿ ಡಾ. ಸುಚಿತ್ರಾ ಹೊಳ್ಳ ಹಾಗೂ ಹರೀಶ್ ಹೊಳ್ಳ ದಂಪತಿಯ ಪುತ್ರ ಹಾಗೂ ಉಜಿರೆಯ ವೇದಮೂರ್ತಿ ಶ್ರೀನಿವಾಸ ಹೊಳ್ಳ ಮತ್ತು ಮೂಕಾಂಬಿಕಾ ಹೊಳ್ಳ ದಂಪತಿಯ ಮೊಮ್ಮಗನಾಗಿದ್ದಾನೆ. ಎಸ್ ಎಸ್ ಎಲ್ ಸಿ ಯಲ್ಲಿ ಮರು ಮೌಲ್ಯಮಾಪನದ ಬಳಿಕ 6 ಅಂಕಗಳನ್ನು ಹೆಚ್ಚಾಗಿ ಪಡೆದು 621 ಅಂಕಗಳನ್ನು ಗಳಿಸಿದ ತೇಜ ಚಿನ್ಮಯ ರಾಜ್ಯಕ್ಕೆ ಐದನೇ ರಾಂಕನ್ನು ಪಡೆದಿದ್ದಾನೆ..