ಬೆಂಗಳೂರು: ಕನ್ನಡದ ಹಿರಿಯ ನಟ ಸುರೇಶ್ ಹೆಬ್ಳೀಕರ್ ಅವರಿಗೆ ಹ್ಯಾಕರ್ಗಳ ಕಾಟ ಎದುರಾಗಿದೆ. ಸುರೇಶ್ ಹೆಬ್ಳೀಕರ್ ಅವರ ಇ-ಮೇಲ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಅಲ್ಲದೆ ಅವರ ಹೆಸರಿನಲ್ಲಿ ಹಲವರಿಗೆ ಇ-ಮೇಲ್ ಕಳಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರದ ಹೆಚ್ಚಾಗಿದ್ದು ಅಲ್ಲಿನ ಜನರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸ್ತಿದ್ದೇವೆ. ದೇಣಿಗೆ ನೀಡಿ ಅಂತ ಸುರೇಶ್ ಹೆಸರಲ್ಲಿ ಅವರ ಗೆಳೆಯರಿಗೆ ಕೇಳಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ಮಾಹಿತಿ ನೀಡಿರುವ ಹೆಬ್ಳೀಕರ್, ತಮ್ಮ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟರೆ ನಿರ್ಲಕ್ಷಿಸಿ ಅಂತ ಹೇಳಿದ್ದಾರೆ.