ಕೆನಡಾ: ಪ್ರತ್ಯೇಕ ಖಲಿಸ್ತಾನ ದೇಶದ ಬೆಂಬಲಿಗರು ಕೆನಡಾ ದೇಶದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ದೇವಸ್ಥಾನವೊಂದಲ್ಲಿ ದಾಂಧಲೆ ನಡೆಸಿದ್ದಾರೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವಾದ ಕೆನಡಾದ ಸುರ್ರೆಯಲ್ಲಿ ಲಕ್ಷ್ಮಿ ನಾರಾಯಣ ದೇಗುಲವು ಅತ್ಯಂತ ಹಳೆಯ ದೇಗುಲ ಎಂದೇ ಹೆಸರಾಗಿತ್ತು. ಈ ದೇಗುಲದ ಮೇಲೆ ದಾಳಿ ನಡೆಸಿರುವ ಪ್ರತ್ಯೇಕ ಖಲಿಸ್ತಾನ ರಾಷ್ಟ್ರದ ಬೆಂಬಲಿಗರು ದಾಂಧಲೆ ನಡೆಸಿರೋದಷ್ಟೇ ಅಲ್ಲ, ಖಲಿಸ್ತಾನ್ ಪರ ಪೋಸ್ಟರ್ಗಳನ್ನೂ ದೇಗುಲದ ಗೋಡೆಗೆ ಅಂಟಿಸಿದ್ದಾರೆ.
2023ರ ಜೂನ್ 18 ಹಂದು ಹತ್ಯೆಗೀಡಾದ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನ ಕೊಲೆ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿರುವ ದಾಳಿಕೋರರು, ಈ ಕುರಿತಾಗಿ ಕೆನಡಾ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ತಮ್ಮ ಪೋಸ್ಟರ್ಗಳಲ್ಲಿ ಆಗ್ರಹಿಸಿದ್ದಾರೆ.
ದೇಗುಲದ ಮೇಲೆ ದಾಳಿ ನಡೆಸಿರುವ ಖಲಿಸ್ತಾನ್ ಉಗ್ರರ ಕೃತ್ಯಕ್ಕೆ ಭಾರೀ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿವಿಧ ದೇಶಗಳಲ್ಲಿ ಪ್ರತ್ಯೇಕತಾವಾದಿಗಳು ದ್ವೇಷದ ಕಿಡಿ ಹೊತ್ತಿಸಲು ಸಂಚು ನಡೆಸ್ತಿದ್ದಾರೆ ಎಂದು ಭಾರತ ಆರೋಪಿಸಿದೆ.