ರಾಯಚೂರು: ದೇವದುರ್ಗ ತಾಲೂಕಿನ ಜಾಲಹಳ್ಳಿ ಸುತ್ತ ಕುದುರೆಗಳು, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಅಪಘಾತ ಸಂಭವಿಸಿ ವ್ಯಕ್ತಿ ಮೃತಪಟ್ಟಿದ್ದಾರೆ. ಭಾನುವಾರ ತಡ ರಾತ್ರಿ ಬೈಕ್ ಗೆ ಕುದುರೆಗೆ ಡಿಕ್ಕಿ ಹೊಡೆದು ಸ್ಥಳೀಯ ಗಾಯಕ ಹಾಗೂ ಮಿಮಿಕ್ರಿ ಆರ್ಟಿಸ್ಟ್ ರಾಜು ಬಾಗೂರು(44) ಮೃತ ಮೃತಪಟ್ಟಿದ್ದಾರೆ.
ನಿನ್ನೆ ತಡ ರಾತ್ರಿ ಕಾರ್ಯಕ್ರಮವೊಂದನ್ನ ಮುಗಿಸಿಕೊಂಡು ಬಾಗೂರು ಗ್ರಾಮಕ್ಕೆ ಹೊರಟಿದ್ದ ವೇಳೆ ಜಾಲಹಳ್ಳಿ ರಸ್ತೆಗಿಳಿದಿದ್ದ ಕುದುರೆಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಅಪಘಾತ ಸಂಭವಿಸಿದೆ. ಬೈಕ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಗಾಯಕ ರಾಜು ಮೃತಪಟ್ಟಿದ್ದಾತೆ. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.