ಬೆಂಗಳೂರು: ಕೆಇಎ ನೇಮಕಾತಿಯ ಎಫ್ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೊನೆಗೂ ಬಂಧನವಾಗಿದೆ.
12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪಾಟೀಲ್ ಅನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು.
ನ.6 ರಂದು ಕಂಪೌಂಡ್ ಹಾರಿ ಪರಾರಿಯಾಗಿದ್ದ ಆರ್ಡಿ ಪಾಟೀಲ್, ಜೈಲಿನಿಂದ ಹೊರಗಡೆ ಇದ್ದುಕೊಂಡೇ ಜಾಮೀನು ಪಡೆಯಲು ಯತ್ನಿಸಿದ್ದ. ಜಾಮೀನು ಅರ್ಜಿಯನ್ನು ಜಾಮೀನು ಅರ್ಜಿಯನ್ನು ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 7ರಂದು ತಿರಸ್ಕರಿಸಿತ್ತು. ಮತ್ತೊಂದಡೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ವಿಚಾರಣೆ ನವಂಬರ್ 16 ಕ್ಕೆ ಮುಂದುಡಿಕೆಯಾಗಿದೆ.
ಕೆಇಎ ಪರೀಕ್ಷೆ ಅಕ್ರಮ ಹಾಗೂ ಆರ್ಡಿ ಪಾಟೀಲ್ ವಿಚಾರ ರಾಜ್ಯ ರಾಜಕೀಯದಲ್ಲಿಯೂ ಬಹಳಷ್ಟು ಸದ್ದು ಮಾಡಿದೆ. ಆರ್ಡಿ ಪಾಟೀಲ್ ಬಂಧನವಾದರೆ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೊರಬರುವ ಆತಂಕ ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಅದಕ್ಕಾಗಿಯೇ ಆತ ಪರಾರಿಯಾಗಲು ಬಿಟ್ಟಿದೆ ಎಂದು ಬಿಜೆಪಿ ಈ ಹಿಂದೆ ವಾಗ್ದಾಳಿ ನಡೆಸಿತ್ತು.